ಕುಂಬಳೆ, ಜು. 14 (DaijiworldNews/SM): ತಮಿಳುನಾಡು ಮೂಲದ ವ್ಯಕ್ತಿಯೋರ್ವ ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ಆರಿಕ್ಕಾಡಿಯಲ್ಲಿ ನಡೆದಿದೆ. ತಮಿಳುನಾಡು ತಂಜಾವೂರಿನ ಕುಮಾರ್ ಷಣ್ಮುಗ(61) ಮೃತಪಟ್ಟವರು.
ನೀರುಪಾಲಾದ ಬಗ್ಗೆ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಡೆಸಿದ ಶೋಧದಿಂದ ಸಂಜೆ ವೇಳೆಗೆ ಮೃತದೇಹವನ್ನು ಪತ್ತೆಹಚ್ಚಲಾಯಿತು.
ಹೊಳೆ ಬದಿ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಲಭಿಸಿದ ಕೆಲ ಚೀಟಿಗಳಿಂದ ತಮಿಳುನಾಡು ನಿವಾಸಿಗಳೆಂದು ಗುರುತು ಪಟ್ಟಹಚ್ಚಲು ಸಾಧ್ಯವಾಯಿತು. ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಮೃತದೇಹವನ್ನು ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ.