ಕಾರ್ಕಳ, ಜು 14 (DaijiworldNews/PY): "ಸಾಮಾಜಿಕ ಚಿಂತನೆ, ರಾಷ್ಟ್ರೀಯ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಪತ್ರಕರ್ತರು ವರದಿಗಾರಿಕೆಯಲ್ಲಿ ತೊಡಗಿಸಿಕೊಂಡಾಗ ಸಾಮಾಜಿಕ ನ್ಯಾಯದೊರಕುತ್ತದೆ. ಪತ್ರಿಕೆಗಳು ಪಾರದರ್ಶಕವಾಗಿರಬೇಕು. ವಸ್ತುನಿಷ್ಠದ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯವು ಪತ್ರಿಕೆಗಳಿಂದ ಹೆಚ್ಚಾದಾಗ ಸಂವಿಧಾನದ ಆಧಾರ ಸ್ತಂಭಗಳು ಇನ್ನಷ್ಟು ಬಲಗೊಳ್ಳಲು ಸಾಧ್ಯ" ಎಂದು ಪತ್ರಕರ್ತ, ಸಾಹಿತಿ ಪುಂಡಲೀಕ ಮರಾಠೆ ಅಭಿಮತ ಹೇಳಿದ್ದಾರೆ.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರೋಟರಿ ಬಾಲವನದಲ್ಲಿ ಆಯೋಜಿಸಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಭೆಯನ್ನು ಉದ್ದೇಶಿಸಿ ಮಾತಾನಾಡಿ, "ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದರಿಂದ ಪತ್ರಿಕೆಯ ಕಾರ್ಯಸಾಧನೆ ಹಾಗೂ ಮಾನವೀಯ ಮೌಲ್ಯಗಳನ್ನು ಮಿಡಿಯುವುದರಲ್ಲಿ ಪತ್ರಿಕಾರಂಗ ಮಹತ್ವದ ಪಾತ್ರವನ್ನು ಮಹತ್ವ" ಎಂದರು.
ಪತ್ರಿಕಾ ವಿತರಕಾದ ಪ್ರಕಾಶ್ ಕಿಣಿ ಅಜೆಕಾರು, ಹರಿಶ್ಚಂದ್ರ ತೆಂಡೂಲ್ಕರ್ ಮಾಳ, ರವೀಂದ್ರ ಎಂ. ಕಾಮತ್ ಬಜಗೋಳಿ, ಗಣಪತಿ ಭಟ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಆರ್.ಬಿ.ಜಗದೀಶ್, ಜಿಲ್ಲಾ ಸಂಘದ ಕಾರ್ಯಕಾರಿ ಸದಸ್ಯ ಹರಿಪ್ರಸಾದ್ ನಂದಳಿಕೆ, ರೋಟರಿಕ್ಲಬ್ನ ರೊ. ಇಕ್ಬಾಲ್ ಅಹಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿದರು, ಶರತ್ ಕಿನ್ನಿಗೋಳಿ ನಿರೂಪಿಸಿದರು. ಕೃಷ್ಣ ನಾಯ್ಕ್ ಧನ್ಯವಾದವಿತ್ತರು.