ಸುಳ್ಯ, ಜು 14 (DaijiworldNews/PY): ಇಲ್ಲಿನ ಜಯನಗರದ ಬಳಿಯ ದೇವಾಲಯದ ಅಧಿಕಾರಿಗಳು ಹಿಂದೂ ಯುವಕರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಕ್ರೈಸ್ತ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
"ಅನ್ಯಧರ್ಮಿಯರಿಗೆ ಆಟವಾಡಲು ಇಲ್ಲಿ ಅವಕಾಶವಿಲ್ಲ. ಕ್ರೈಸ್ತ ಯುವಕರು ಚರ್ಚ್ ಆವರಣದಲ್ಲಿ ಆಟವಾಡಲಿ. ಚರ್ಚ್ ಮೈದಾನದಲ್ಲಿ ಇತರರಿಗೆ ಆಡಲು ಬಿಡುತ್ತಾರೆಯೇ?" ಎಂದು ದೇವಾಲಯದ ಅಧಿಕಾರಿಗಳು ಕೇಳಿದ್ದಾರೆ.
ಇಲ್ಲಿ ಅನ್ಯಧರ್ಮಿಯರಿಗೆ ಆಡಲು ಅವಕಾಶವಿಲ್ಲ ಎಂದು ಯುವಕನನ್ನು ಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸಿದ್ದು, "ಹಿಂದೂಗಳು ಅನ್ಯಧರ್ಮಿಯರೊಡನೆ ಏಕೆ ಆಡುತ್ತಾರೆ?" ಎಂದು ಪ್ರವೀಣ್ ಎಂಬವರು ಕೇಳಿದ್ದಾರೆ.
ಈ ವೇಳೆ ಯುವಕ ಕ್ರೈಸ್ತ ಯುವಕನನ್ನು ಬೆಂಬಲಿಸಿದ ಹಿಂದೂ ಯುವಕರು, "ಆಡುವ ವಿಚಾರದಲ್ಲಿ ಧರ್ಮದ ವಿಚಾರವನ್ನು ಏಕೆ ತರುತ್ತೀರಿ?" ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.