ಮಂಗಳೂರು, ಜು. 12 (DaijiworldNews/SM): ಮನೆಕಳ್ಳತನವಾದ ಕೆಲವೇ ಗಂಟೆಯಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿರುವ ಘಟನೆ ಮಂಗಳೂರಿನ ಕೆಳಗಿನ ತೋಕುರಿನಲ್ಲಿ ನಡೆದಿದೆ.
ಕೆಳಗಿನ ತೋಕೂರು ನಿವಾಸಿ ದಾವೂದ್ ಹಕೀಂ ಬಂಧಿತ ಆರೋಪಿಯಾಗಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನೆರೆ ಮನೆಯ ವ್ಯಕ್ತಿ ಹಂಚು ತೆಗೆದು ನುಗ್ಗಿ ನಗ ನಗದು ಕಳವು ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಯಿಂದ 248.600 ಗ್ರಾಂ ತೂಕದ ಚಿನ್ನಾಭರಣ, ನಗದು ಸಹಿತ 11,11,270 ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯು ಕಳ್ಳತನವಾದ ಮನೆಯ ನೆರೆಹೊರೆಯ ವ್ಯಕ್ತಿಯಾಗಿದ್ದಾನೆ.
ಮನೆಯ ಸದಸ್ಯರ ವಿಶ್ವಾಸಗಳಿಸಿ ಮನೆಯ ವಿಚಾರಗಳನ್ನು ತಿಳಿದುಕೊಂಡಿದ್ದ ಎಂದು ತಿಳಿದುಬಂದಿದೆ. ಮನೆಯವರು ಬೇರೆ ಊರಿಗೆ ತೆರಳುವ ವಿಷಯ ತಿಳಿದುಕೊಂಡು ಆರೋಪಿಯಿಂದ ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.