ಕಾಸರಗೋಡು, ಜು 13 (DaijiworldNews/MS): ಕಾಸರಗೋಡಿನ ನೂತನ ಜಿಲ್ಲಾಧಿಕಾರಿಯಾಗಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ಜು.13 ರ ಮಂಗಳವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು.
ಕಾಸರಗೋಡು ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿರುವ ಭಂಡಾರಿ ಸ್ವಾಗತ್'ರಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಲಿ ಜಿಲ್ಲಾಧಿಕಾರಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಕಡತಗಳನ್ನು ಹಸ್ತಾಂತರಿಸುವ ಮೂಲಕ ಭಂದಾರಿ ಸ್ವಾಗತ್ ರಿಗೆ ಡಾ. ಡಿ. ಸಜಿತ್ ಬಾಬು ಅಧಿಕಾರ ಹಸ್ತಾಂತರಿಸಿದರು. ಭಂದಾರಿ ಸ್ವಾಗತ್ ಕಾಸರಗೋಡು ಜಿಲ್ಲೆಯ 24ನೇ ಜಿಲ್ಲಾಧಿಕಾರಿಯಾಗಿದ್ದಾರೆ.
ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎ . ಕೆ ರಾಮಚಂದ್ರನ್ , ಉಪ ಜಿಲ್ಲಾಧಿಕಾರಿ ಡಿ . ಆರ್ ಮೇಘಶ್ರೀ, ಕಾಸರಗೋಡು ಕಂದಾಯಾಧಿಕಾರಿ ಅತುಲ್ ಸ್ವಾಮಿನಾಥನ್ ಮೊದಲಾದವರು ಉಪಸ್ಥಿತರಿದ್ದರು. ಮಹಾರಾಷ್ಟ್ರ ಮೂಲದ ಭಂಡಾರಿ ಸ್ವಾಗತ್ ವಾಣಿಜ್ಯ ಇಲಾಖಾ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಡಾ. ಡಿ. ಸಜಿತ್ ಬಾಬು ರವರನ್ನು ನಾಗರಿಕ ಪೂರೈಕೆ ಇಲಾಖಾ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ .
ಕೋವಿಡ್ ನಿಯಂತ್ರಣಕ್ಕೆ ಪ್ರಮುಖ ಆದ್ಯತೆ ನೀಡುವುದಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನೂತನ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಹೇಳಿದರು.