ಮಂಗಳೂರು, ಜು. 12 (DaijiworldNews/SM): ಸ್ಮಾರ್ಟ್ ಸಿಟಿ ಅಡಿಯಲ್ಲಿ ಮಂಗಳೂರು ನಗರದಲ್ಲಿ ಸೈಕಲ್ ಪೋರ್ ಚೇಂಜ್ ಯೋಜನೆ ಜಾರಿಗೆ ಯೋಜನೆ ಸಿದ್ಧಗೊಂಡಿದೆ. ತರಾತುರಿಯಲ್ಲಿ ಯೋಜನೆ ಜಾರಿ ಮುಂದಾಗಲಾಗಿದೆ. ಇದರಲ್ಲಿ ಯಾವುದೇ ಅಭಿವೃದ್ಧಿಯ ಯೋಜನೆ ಇಲ್ಲ. ಇಲ್ಲಿನ ಶಾಸಕ ಸರ್ವಾಧಿಕಾರ ದೋರಣೆ ಮಾಡ್ತಾ ಇದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ವಿನಯ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸೈಕಲ್ ಪೋರ್ ಚೇಂಜ್ ಯೋಜನೆಗೆ ೮ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ದ.ಕ ಜಿಲ್ಲೆಯ ವಾಣಿಜ್ಯ ಕೇಂದ್ರ ಪ್ರದೇಶಗಳನ್ನು ಅವೈಜ್ಞಾನಿಕವಾಗಿ ಕಾಮಗಾರಿ ಹೆಸರಲ್ಲಿ ಅಗೆದು ಹಾಕಲಾಗಿದೆ. ಮಂಗಳೂರು ನಗರ ಒಂದು ಗೊಂದಲದ ಗೂಡಾಗಿದೆ. ವ್ಯಾಪಾರ ವಹಿವಾಟಿಗೆ ತೊಂದರೆ ಆಗಿದೆ. ಸೈಕಲ್ ಪಥಕ್ಕೆ ಬೇಕಾದ ಯಾವುದೇ ವ್ಯವಸ್ಥೆ ಇಲ್ಲಿಲ್ಲ. ಬೆಂಗಳೂರಿನಲ್ಲಿ ಮಾಡಲಾದ ವ್ಯವಸ್ಥಿತ ಸೈಕಲ್ ಪಥದ ಯೋಜನೆ ಇಲ್ಲಿಯೂ ಜಾರಿಗೆ ತರಲಿ. ಜನರಿಗೆ ಸಂಚಾರ ನಡೆಸಲೇ ಇಲ್ಲಿ ಸಮರ್ಪಕ ಫೂಟ್ ಪಾತ್ ವ್ಯವಸ್ಥೆ ಇಲ್ಲ. ಆದರೆ, ಈ ಕಿರಿದಾದ ರಸ್ತೆಯಲ್ಲಿ ಸೈಕಲ್ ಪಥ ಮಾಡಿದ್ರೆ ರಸ್ತೆ ಇನ್ನೂ ಕಿರಿದಾಗುತ್ತದೆ.
ಸ್ಮಾರ್ಟ್ ಸಿಟಿ ಸೈಕಲ್ ಪಥ ಯೋಜನೆ ಅಡಿ ಶಾಸಕ ಕಾಮತ್ ಹಣ ಲೂಟಿ ಮಾಡುವ ಕಾರ್ಯಕ್ಕಿಳಿದ್ದಿದ್ದಾರೆ. ಈ ಯೋಜನೆ ಶಾಸಕರ ಹಣ ಮಾಡುವ ಯೋಜನೆಯಾಗಿದೆ ಎಂದು ಆರೋಪಿಸಿದ್ದಾರೆ.