ಕಾರ್ಕಳ, ಜು. 12 (DaijiworldNews/HR): ಪಾರದರ್ಶಕ ಆಡಳಿತಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಸದಾಬೆಂಬಲ ನೀಡಲಿದೆ. ಬಿಲ್ ಪಾವತಿಯಾದ ಬಳಿಕ ಸಭೆಯ ಅನುಮೋದನೇ ಇಡುವುದು ತರವಲ್ಲ. ಕಾಮಗಾರಿ ಬಗ್ಗೆ ಆಯಾ ವಾರ್ಡ್ನ ಸದಸ್ಯರ ಒಪ್ಪಿಗೆ ಪಡೆದ ಬಳಿಕವೇ ಬಿಲ್ ಕಾಮಗಾರಿ ನಿರ್ವಹಿಸಿದವರಿಗೆ ಪಾವತಿಸಬೇಕು ಎಂದು ಹಿರಿಯ ಸದಸ್ಯ ಅಶ್ಪಕ್ ಅಹಮ್ಮದ್ ಸಭೆಯಲ್ಲಿ ವಿಚಾರ ಮಂಡಿಸಿದರು.
ಕಾರ್ಕಳ ಪುರಸಭೆಯ ಅಧ್ಯಕ್ಷೆ ಸುಮ ಅಧ್ಯಕ್ಷತೆಯಲ್ಲಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಜರುಗಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದ ಅವರು, ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ನೀಡಲಾದ ಅಜೆಂಡದ ಜೊತೆಗೆ ಮೂರು ತಿಂಗಳ ಲೆಕ್ಕಪತ್ರವಿಲ್ಲದಿರುವ ಬಗ್ಗೆ ಉಲ್ಲೇಖಿಸಿ ಮಾತು ಮುಂದುವರಿಸಿದ ಅವರು ಕುದುರೆ ವ್ಯಾಪಾರ ನಡೆಯುತ್ತಿರುವ ಕುರಿತು ಅನುಮಾನ ವ್ಯಕ್ತಪಡಿಸಿದರು.
ಪುರಸಭೆ ಅಧೀನದಲ್ಲಿರುವ ಕರಿಯಕಲ್ಲು ಸ್ಮಶಾನದಲ್ಲಿ ಕಾನೂನು ಬಾಹಿರವಾಗಿ ಸಮಿತಿ ರಚಿಸಲಾಗಿದೆ. ಪುರಸಭೆ ವತಿಯಿಂದ ಸ್ಮಶಾನಕ್ಕೆ ಸಮಿತಿಯಾದರೆ ಆ ಕುರಿತು ಮಾಹಿತಿ ನೀಡಿ. ಸ್ಮಶಾನದ ಕೀ ಯಾರ ಕೈಯಲ್ಲಿ ಇದೆ ಎಂದು ಪ್ರಶ್ನಿಸಿದರು. ಸ್ಥಳಿಯರ ಸಭೆ ಕರೆದು ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಅಧ್ಯಕ್ಷೆ ಸುಮಾಕೇಶವ್ ಹೇಳಿದರು.ಕಾನೂನಿನ ಪ್ರಕಾರ ನಡೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ರೂಪಾ ಶೆಟ್ಟಿ ಹೇಳಿದರು.
ಕುಡಿಯುವ ನೀರಿನ ಅನುದಾನ ಹಂಚಿಕೆ ವಿಚಾರವಾಗಿ ಸುದೀರ್ಘ ಚರ್ಚೆ ನಡೆಯಿತು. ಪ್ರತಿಮಾ ರಾಣೆ ನನ್ನ ವಾರ್ಡ್ಗೆ ಬಂದ ಅನುದಾನ ಹಿಂದೆ ವಾಪಸ್ ಹೋಗಿತ್ತು. ಆಗ ಚರ್ಚೆಗಳು ನಡೆದ ಸಂದರ್ಭ ಪುರಸಭೆ ವಾರ್ಡ್ ನಿಂದ ಅನುದಾನ ನೀಡುವ ಬಗ್ಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದೀರಿ. ಈಗ 30 ಲಕ್ಷದಲ್ಲಿ 10 ಲಕ್ಷ ನನ್ನ ವಾರ್ಡ್ಗೆ ನೀಡುವಂತೆ ಅವರು ಒತ್ತಾಯಿಸಿದರು. 15ನೇ ಹಣಕಾಸು ಸಹಿತ ಎಲ್ಲ ಅನುದಾನಗಳನ್ನು ಎಲ್ಲ ವಾರ್ಡ್ಗೂ ಹಂಚಿ ನೀಡುವಂತೆ ಯೋಗೀಶ್ ದೇವಾಡಿಗ ಸಹಿತ ಕೆಲ ಸದಸ್ಯರು ಸಲಹೆ ನೀಡಿದರು. ಕುಡಿಯುವ ನೀರು ತುರ್ತಾಗಿ ಇರುವ ವಾರ್ಡ್ಗಳಿಗೆ ಹಂಚಿ ಉಳಿದದನ್ನು ಪ್ರತಿಮಾರವರ ವಾರ್ಡ್ಗೆ ನೀಡಿ ಎಂದು ಅಶ್ಪಕ್ ಹೇಳಿದರು.
ಕಾಮಗಾರಿಗಳ ಬಿಲ್ ಪಾವತಿ ಮುಂಚಿತ ಎಲ್ಲ ವಾರ್ಡ್ ಸದಸ್ಯರಿಂದ ಕಾಮಗಾರಿಯ ಗುಣಮಟ್ಟ ಕುರಿತು ಲಿಖಿತ ಒಪ್ಪಿಗೆ ಪಡೆದುಕೊಳ್ಳುವುದು ಸೂಕ್ತ ಎಂದು ಆಡಳಿತ ಪಕ್ಷದ ಸದಸ್ಯ ಯೊಗೀಶ್ ದೇವಾಡಿಗ, ಪ್ರದೀಪ್ ಸಲಹೆ ನೀಡಿದರು. ವಾರ್ಡ್ ಸದಸ್ಯರ ಗಮನಕ್ಕೆ ತಾರದೇ ಕೆಲಸ ಮಾಡುವುದು ಸರಿಯಲ್ಲ ಎಂದು ವಿಪಕ್ಷ ಸದಸ್ಯರಾದ ಪ್ರತಿಭಾ, ರೆಹಮತ್ ಎನ್ ಶೇಕ್ ಪ್ರಶ್ನಿಸಿದರು.
ರೈತರು ಬೆಳೆದ ಹಣ್ಣು, ತರಕಾರಿ ಸಾವಯವ ತರಕಾರಿ ಒಳಗೊಂಡಂತೆ ಮಾರಕಟ್ಟೆ ಪ್ರಾಂಗಣದಲ್ಲಿ ಸಂತೆ ನಡೆಸಲು ಹಾಗೂ ಸಂತೆ ಬಳಿಕ ಅಲ್ಲಿ ಉತ್ಪತ್ತಿಯಾಗುವ ಹಸಿ, ಒಣ ಕಸವನ್ನು ಸ್ವಚ್ಛಗೊಳಿಸಲು ಪುರಸಭೆ ಸಹಕಾರ ಕೇಳುವ ಬಗ್ಗೆ ವಿಷಯದ ಮೇಲೆ ಚರ್ಚೆ ಬಂದಾಗ ಮುಂದಿನ ಸಭೆಯಲ್ಲಿ ಸಭೆಗೆ ಮಾಹಿತಿ ನೀಡಿದರೆ ಉತ್ತಮ ಎನ್ನುವ ಸಲಹೆಯನ್ನು ಶುಭದ ರಾವ್ ವ್ಯಕ್ತಪಡಿಸಿದಾಗ ಮುಂದಿನ ಸಭೆಯಲ್ಲಿ ನಿರ್ಧರಿಸುವ ಎಂದು ಮುಖ್ಯಾಧಿಕಾರಿ ಹೇಳಿದರು. ಸಾಲ್ಮರ ಬಳಿ ಅಪಘಾತ ಸಂಭವಿಸುವುದನ್ನು ತಡೆಯಲು ವಿಭಜಕಕ್ಕೆ ರಿಪ್ಲಕ್ಟರ್ ಅವಶ್ಯಕತೆ ಕುರಿತು ಸದ್ಯರಾದ ಪ್ರಭಾ ಹಾಗೂ ಅಶ್ಪಕ್ ಹೇಳಿದರು.
ಒಳಚರಂಡಿಗೆ ಮ್ಯಾನುವೆಲ್ ಪೈಪುಗಳಿಗೆ ಸಾರ್ವಜನಿಕರು ನೇರ ತ್ಯಾಜ್ಯಗಳನ್ನು ಬಿಡುತ್ತಿದ್ದಾರೆ ಅದನ್ನು ಪತ್ತೆ ಹಚ್ಚಿ ಅಂತಹ ಸಂಪರ್ಕಗಳನ್ನು ಸ್ಥಗಿತಗೊಳಿಸಬೇಕು ಎಂದು ಯೊಗೀಶ್ ದೇವಾಡಿಗ ಹೇಳಿದರು.
ಸಭೆಯಯಲ್ಲಿ ನೀರು ಸರಬರಾಜು, ತ್ಯಾಜ್ಯ ವಿಲೆವಾರಿ, ದಾರಿದೀಪ, ರಸ್ತೆ ಸಮಸ್ಯೆ, ಸ್ವಚ್ಚತೆ, ರಸ್ತೆ ಬದಿಯ ಅಪಯಕಾರಿ ಮರ, ತೆರವು, ಪುರಸಭೆ ವಾಹನ, ಸಿಬಂದಿ ಕೊರತೆ, ಇತ್ಯಾದಿಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸದಸ್ಯರಾದ ವಿನ್ನಿಬೋಲ್ಡ್ ಮೆಂಡೋನ್ಸ, ಸೋಮನಾಥ, ಪ್ರದೀಪ್, ಮೀನಾಕ್ಷಿ, ಶಶಿಕಲಾ ಪಿ ಶೆಟ್ಟಿ, ನಳಿನಿ ವಿ. ಆಚಾರ್ಯ, ಭಾರತಿ, ಶಶಿಕಲಾ ಸಹಿತ ಉಪಸ್ಥಿತರಿದ್ದ ಸದಸ್ಯರೆಲ್ಲರೂ ತಮ್ಮ ವಾರ್ಡ್ ಸಮಸ್ಯೆಗಳ ಹಾಗೂ ಅಭಿವೃದ್ಧಿಗಳ ಕುರಿತು ವಿವಿಧ ಚರ್ಚೆಗಳಲ್ಲಿ ಭಾಗವಹಿಸಿ ಅಭಿಪ್ರಾಯಗಳನ್ನು ಮಂಡಿಸಿದರು.