ಮಂಗಳೂರು, ಜು. 12 (DaijiworldNews/HR): ಭಾರೀ ಮಳೆ ಮತ್ತು ವಾಹನಗಳು ಒಂದರ ಹಿಂದೆ ಒಂದು ವೇಗವಾಗಿ ಚಲಿಸುತ್ತಿದ್ದರಿಂದ ನಾಯಿಯೊಂದು ರಸ್ತೆ ದಾಟಲು ಕಾಯುತ್ತಿರುವುದನ್ನು ಗಮನಿಸಿದ ಒಬ್ಬ ಹುಡುಗ ನಾಯಿಯನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದ್ದು, ಆತನಿಗೆ ಪ್ರಾಣಿಗಳ ಬಗ್ಗೆ ಇರುವ ಪ್ರೀತಿ ಮತ್ತು ಕಾಳಜಿ ಬಗ್ಗೆ ನಾಗರಿಕರು ಪ್ರಶಂಸೆಗೆ ವ್ಯಕ್ತಪಡಿಸಿದ್ದು, ಈ ಘಟನೆ ಮಾಲೆಮಾರ್ನ ಕೊಲ್ಲಾರಾದಲ್ಲಿ ನಡೆಸಿದೆ.
ಜುಲೈ 10 ರ ಶನಿವಾರ ಮಧ್ಯಾಹ್ನ 1.30 ರ ಸುಮಾರಿಗೆ ನಾಯಿ ರಸ್ತೆ ದಾಟಲು ಕಾಯುತ್ತಿತ್ತು. ಆದರೆ ವಾಹನಗಳು ಒಂದರ ಹಿಂದೆ ಒಂದರಂತೆ ಬರುತ್ತಿದ್ದಂತೆ ನಾಯಿಯು ಭಯಗೊಂಡು ನಿಂತಿತ್ತು. ಆಗ ತರಕಾರಿಗಳನ್ನು ಮಾರಾಟ ಮಾಡಲು ಸೈಕಲ್ ಮೂಲಕ ಹೋಗುತ್ತಿದ್ದ ಹುಡುಗ ನಾಯಿಯನ್ನು ಗಮನಿಸಿ ಅದರ ಹತ್ತಿರ ಬಂದು ಎರಡು ಮುಂಭಾಗದ ಕಾಲುಗಳಿಂದ ನಾಯಿಯನ್ನು ಹಿಡಿದು ರಸ್ತೆ ದಾಟಿಸಿದ್ದಾನೆ.
ಹುಡುಗ ನಾಯಿಯನ್ನು ರಸ್ತೆ ದಾಟಿಸುತ್ತಿರುವ ಎಂಟು ಸೆಕೆಂಡ್ ವಿಡಿಯೋ ಕ್ಲಿಪ್ ಅನ್ನು ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಅಪುಲ್ ಆಳ್ವಾ ಸೆರೆಹಿಡಿದಿದ್ದಾರೆ.