ಉಡುಪಿ, ಜು 12 (DaijiworldNews/PY): ಅಂಗನವಾಡಿ ನೌಕರರ ಸಂಘದ ವತಿಯಿಂದ ಇಂದು ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಮುಖಂಡೆ ಸುಶೀಲ ನಾಡಗೌಡ, ಇವತ್ತು ಕೊರೊನಾ ಸೋಂಕಿನಿಂದ ಮೃತಪಟ್ಟ ನಮ್ಮ ನೌಕರರಿಗೂ ಹಾಗೂ ಇತರ ಫ್ರಂಟ್ ಲೈನ್ ಕಾರ್ಯಕರ್ತರ ವಿಮೆಗೂ ಸರಕಾರ ವ್ಯತ್ಯಾಸ ಉಂಟು ಮಾಡಿದೆ. ಆಶಾ ಕಾರ್ಯಕರ್ತೆಯರಿಗೆ ಐವತ್ತು ಲಕ್ಷ ಪರಿಹಾರ ಕೊಡುತ್ತದೆ ನಮಗೆ ಮೂವತ್ತು ಲಕ್ಷ ಭಿನ್ನತೆಯನ್ನು ತೆಗೆದು ಹಾಕಬೇಕು. ಅದರೊಂದಿಗೆ ಪೋಷಣ್ ಟ್ರ್ಯಾಕರ್ ಎಂಬ ಪ್ರಕ್ರಿಯೆಯನ್ನು ಸರಕಾರ ತಂದಿದ್ದು ಮೊಬೈಲ್ ಆ್ಯಪ್ನಲ್ಲಿ ವಿವರ ನೊಂದಾಯಿಸಲಿದ್ದು ಅಂತಹ ಫಲನುಭವಿಗಳಿಗೆ ಪೋಷ್ಠಿಕಾ ಆಹಾರ ಸಿಗುತ್ತದೆ. ಆಪ್'ಲೋಡ್ ಮಾಡದ ಅಂಗನವಾಡಿ ಸಹಾಯಕಿಯರ ಗೌರವ ಧನ ಕಡಿತಗೊಳಿಸುವ ಕುರಿತು ಕೂಡ ಹೇಳಲಾಗಿದೆ. ಈ ಪೋಷನ್ ಟ್ರ್ಯಾಕರ್ ಅನ್ನು ತೆಗೆದು ಹಾಕಲು ವಿನಂತಿಸಿದ್ದಾರೆ.
"ಕೇಂದ್ರ ಸರಕಾರ ಇವತ್ತು ನ್ಯೂಟ್ರಿಕ್ ಗಾರ್ಡನ್ ಮಾಡಲು ನಮಗೆ ಬೀಜಗಳನ್ನು ಕಳುಹಿಸಿಕೊಡುತ್ತದೆ. ಆದರೆ ಅದೆಷ್ಟೋ ಬಹಳಷ್ಟು ಮಂದಿ ಬಾಡಿಗೆ ಕಟ್ಟಡದಲ್ಲಿದ್ದಾರೆ. ಜಾಗದ ಕೊರತೆ ಇದೆ ಈ ಯೋಜನೆ ಹೇಗೆ ಅನುಷ್ಠಾನಿಸುವುದು. ಅದರೊಂದಿಗೆ ಉದ್ಯೋಗವನ್ನು ಖಾಯಂಗೊಳಿಸಿ ಜೀವನ ಭದ್ರತೆಯೊಂದಿಗೆ, ನಿವೃತ್ತಿಯ ನಂತರ ಪಿಂಚಣೆಯನ್ನು ಕೊಡಬೇಕೆಂದು ಆಗ್ರಹಿಸಿದರು. ಸರಕಾರ ಹಲವಾರು ನೌಕರರಿಗೆ ಸೀರೆಯನ್ನು ಕೊಟ್ಟಿಲ್ಲ. ಬಹಳಷ್ಟು ಕಾರ್ಯಕ್ರಮ ನಡೆಸಿ ಪೋಟೊ ಆಪ್ ಲೋಡ್ ಮಾಡಲು ಹೇಳುತ್ತಾರೆ. ಆದರೆ ಸಮವಸ್ತ್ರ ಕೊಡಲು ಸರಕಾರ ವಿಳಂಬ ಮಾಡುತ್ತದೆ" ಎಂದು ಹೇಳಿದರು.
ಅದರೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು, ಅಸ್ತಿತ್ವದಲ್ಲಿರುವ ಸೌಲಭ್ಯಗಳ ಅನುಷ್ಠಾನ, ಕುಂದು ಕೊರತೆ ಸಮಿತಿ ರಚನೆಗೆ ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಭಾರತಿ, ಗೀತಾ ಪಂಗಾಳ, ಉಡುಪಿ ತಾಲೂಕು ಅಧ್ಯಕ್ಷೆ ಅಂಬಿಕಾ, ಕಾರ್ಯ ದರ್ಶಿ ಪ್ರಮೀಳಾ, ಆಶಾಲತಾ, ಯಶೋಧ ಮುಂತಾದವರು ಉಪಸ್ಥಿತರಿದ್ದರು.