ಮಂಗಳೂರು, ಜು. 12 (DaijiworldNews/HR): ಬೈಕಂಪಾಡಿ ಫ್ಲೈಓವರ್ನಲ್ಲಿ ಬುಲೆಟ್ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ದೊಡ್ದತೋಟ ಬಳಿಯ ಮರ್ಕಾಜೆ ಪುರುಷೋತಮ್ ಅವರ ಪುತ್ರ ತೇಜಸ್ (28) ಎಂದು ಗುರುತಿಸಲಾಗಿದೆ.
ಕುಲೈ ಬಳಿಯ ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ತೇಜಸ್ ಕೆಲಸ ಮುಗಿಸಿ ತೆರಳುತ್ತಿದ್ದ ಈ ಘಟನೆ ಸಂಭಂವಿಸಿದೆ.
ಬುಲೆಟ್ ಟ್ಯಾಂಕರ್ನ ಹಿಂಭಾಗದಲ್ಲಿ ಅಳವಡಿಸಲಾದ ಕಬ್ಬಿಣದ ಪೈಪ್ ತೇಜಸ್ನ ಕಾಲುಗಳಿಗೆ ಸಿಲುಕಿ ಆತ ಸ್ಕೂಟರ್ನೊಂದಿಗೆ ಟ್ಯಾಂಕರ್ನಿಂದ ಸ್ವಲ್ಪ ದೂರಕ್ಕೆ ಎಳೆಯಲ್ಪಟ್ಟಿದ್ದ ಎನ್ನಲಾಗಿದೆ.