ಉಡುಪಿ, ಜು.11 (DaijiworldNews/HR): ಬಾಗಲಕೋಟೆ ಮೂಲದ ಅರುಣ್ ಮತ್ತು ಭಾರತಿ ಎಂಬವರ 2.5 ವರ್ಷದ ಮಗು ಇಂದು ಬೆಳಿಗ್ಗೆಯಿಂದ ನಾಪತ್ತೆಯಾಗಿದೆ.
ದಂಪತಿಗಳು ಇಲ್ಲಿ ಉಡುಪಿಯಲ್ಲಿ ಕರಾವಳಿ ಬೈಪಾಸ್ ಬಳಿಯ ಶೆಡ್ನಲ್ಲಿ ವಾಸಿಸುತ್ತಿದ್ದರು.
ದಂಪತಿಗೆ ಪರಿಚಿತ ವ್ಯಕ್ತಿಯೊಬ್ಬರು ಬೆಳಗಿನ ಉಪಾಹಾರಕ್ಕಾಗಿ ಮಗುವನ್ನು ಬೆಳಿಗ್ಗೆ ಕರೆದೊಯ್ದಿದ್ದರು. ಇಬ್ಬರೂ ಹಿಂತಿರುಗಲಿಲ್ಲ.
ವಿಚಾರಣೆಗಾಗಿ ದಂಪತಿಯನ್ನು ಉಡುಪಿ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ.
ಇನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬ ಮಗುವನ್ನು ಎತ್ತಿಕೊಂಡು ಉಡುಪಿಯಿಂದ ಸಂತೆಕಟ್ಟೆ ಕಡೆಗೆ ಹೋಗುವ ಬಸ್ಸಿನಲ್ಲಿ ಹೋಗಿರುವುದು ಕಂಡುಬಂದಿದೆ. ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.