ಉಡುಪಿ, ಜು.10 (DaijiworldNews/HR): ಭಾನುವಾರದಿಂದ ಉಡುಪಿ ಕೃಷ್ಣ ಮಠ ತೆರಯಲಿದ್ದು, ಮೂರು ತಿಂಗಳ ಬಳಿಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ.
ಪ್ರತಿದಿನ ಮದ್ಯಾಹ್ನ 2ಗಂಟೆಯಿಂದ ಸಂಜೆ6 ಗಂಟೆಯವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಶ್ರಿಪಾದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಬೇರೆ ಬೇರೆ ಕಡೆಯ ದೇವಾಲಯಗಳು ತೆರೆದ ಒಂದು ವಾರದ ಬಳಿಕ ದರ್ಶನಕ್ಕೆ ಕೃಷ್ಣ ಮಠ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ.
ಇನ್ನು ದೇವಾಲಯಕ್ಕೆ ದರ್ಶನಕ್ಕೆ ಬರುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.