ಕಾರ್ಕಳ, ಜು.10 (DaijiworldNews/HR): ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ದೇಶದ ಗಡಿಭಾಗದಲ್ಲಿ ದೇಶ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ನಮ್ಮ ದೇಶದ ಹೆಮ್ಮೆಯ ಸೈನಿಕರ ಸಾವನ್ನು ಬಯಸುವ ಕ್ರೂರ ಮನಸ್ಥತಿಯ ಕಾಂಗ್ರೆಸ್ ಕಾರ್ಯಕರ್ತನ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಿಲುವನ್ನು ಕಾರ್ಕಳ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ" ಎಂದು ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ, ದೀರ್ಘಕಾಲದಿಂದ ಬೇರೆ ಬೇರೆ ಪಕ್ಷಗಳಲ್ಲಿ ರಾಜಕೀಯ ಮಾಡಿಕೊಂಡು ಬಂದಿದ್ದ ಹಿರಿಯ ಮುತ್ಸದ್ದಿ ಎನಿಸಿಕೊಂಡವರಾಗಿದ್ದು, ವ್ಯಕ್ತಿಯ ಪರವಾಗಿ ನಿಂತಿರುವುದು ದೇಶ ರಕ್ಷಣೆ ಬಗೆಗಿನ ನಿಮ್ಮ ನಿಲುವು ಏನೆಂಬುದು ಎತ್ತಿ ತೋರಿಸುತ್ತದೆ. ದೇಶ ದ್ರೋಹಿ ಹೇಳಿಕೆಗಳನ್ನು ನೀಡುವವರನ್ನು ನಿಮ್ಮ ಜೊತೆಗಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಇದೆ ಮೊದಲಲ್ಲ. ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಬೆಂಬಲ, ಮಂಗಳೂರು ಗಲಭೆಗೆ ಬೆಂಬಲ, ಹಿಂದೂ ಕಾರ್ಯಕರ್ತರ ಕೊಲೆಗಳ ಸಮರ್ಥನೆ, ನಿಮ್ಮ ಆಡಳಿತದಲ್ಲಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳ ದೇಶ ದ್ರೋಹಿ ಕೃತ್ಯಗಳ ಪ್ರಕರಣಗಳನ್ನು ಹಿಂತೆಗೆದುಕೊಂಡಿರುವುದು, ಮತ್ತು ವಿಧಾನ ಸಭೆಯಲ್ಲಿ ಯಾಸಿನ್ ಭಟ್ಕಳ ನಂತಹ ಭಯೋತ್ಪಾದಕನನ್ನು ಸಮರ್ಥಿಸಿ ಮಾತನಾಡುವ ನಿಮ್ಮ ಒಲೈಕಾ ರಾಜಕಾರಣ ಮತ್ತು ಪಾಕಿಸ್ತಾನ ಪ್ರೇಮ ಏನೆಂದು ಬಹಿರಂಗವಾಗುತ್ತಿದೆ. ರಾಷ್ಟ್ರೀಯತೆ ವಿಚಾರದಲ್ಲಿ ಕಾಂಗ್ರೆಸ್ ನಿಲುವನ್ನು ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ರಾಜ್ಯದ ಜನತೆಯ ಮುಂದೆ ಸ್ಪಷ್ಟಪಡಿಸಬೇಕು" ಎಂದರು.
ಇನ್ನು "ರಾಧಾಕೃಷ್ಣ ನಾಯಕ್ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಠಿಸಿ ದೇಶ ಮತ್ತು ವ್ಯಕ್ತಿಗಳ ನಿಂದನೆ ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ತನಿಖೆಗಾಗಿ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿರುವುದನ್ನು ಹಲ್ಲೆಯಾಗಿದೆ ಎಂಬುದಾಗಿ ಬಿಂಬಿಸಿ ದಕ್ಷ ಪೊಲೀಸ್ ವ್ಯವಸ್ಥೆಯ ಬಗ್ಗೆ ದೂಷಣೆ ಮಾಡುವುದು, ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಕಾಂಗ್ರೆಸ್ನ ರಾಜಕೀಯ ಅಜೆಂಡಾಗಳಲ್ಲಿ ಒಂದು. ಈ ಪ್ರಕರಣದಲ್ಲಿ ಈತನ ಮೇಲೆ ಪೊಲೀಸ್ ಇಲಾಖೆ ದೇಶ ದ್ರೋಹದ ಕೇಸು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನವೀನ್
ನಾಯಕ್ ಆಗ್ರಹಿಸಿದ್ದಾರೆ.