ಉಡುಪಿ, ಜು 10 (DaijiworldNews/MS): ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸಮಲತಾ ಅವರ ಮಧ್ಯೆ ಕೆಆರ್ ಎಸ್ ಜಲಾಶಯದ ವಿಚಾರದಲ್ಲಿ ವಾಕ್ಸಮರ ಮುಂದುವರಿದಿರುವಂತೆ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಅರವಿಂದ ಲಿಂಬಾವಳಿ , " ಕೆ.ಆರ್.ಎಸ್ ಡ್ಯಾಮ್ ನಲ್ಲಿ ನಿಜವಾಗಿಯೂ ಬಿರುಕು ಬಂದಿತ್ತು. ಅದನ್ನು ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ್ದು. ಆ ಕೆಲಸವನ್ನು ನೀರಾವರಿ ಇಲಾಖೆಯವರು ಕೈಗೆತ್ತಿಕೊಳ್ಳುತ್ತಾರೆ. ಅವರು ಪರಸ್ಪರ ಜಗಳ ಮಾಡ್ಕೊಂಡು ರಾಜಕೀಯ ಮಟ್ಟದಿಂದ ಕೆಳಗಿಳಿದು ವಾದ ಮಾಡುವುದು ಶೋಭೆ ತರುವಂತದ್ದಲ್ಲ. ಇಬ್ಬರೂ ಯೋಚನೆ ಮಾಡಬೇಕು ಎಂದು ಹೇಳಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು. ಸುಮಲತಾರವರು ಏಕಾಂಗಿ ಮಾಡಿಬಿಟ್ರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸುಮಲತಾರವರು ಏಕಾಂಗಿಯಾಗೆ ಗೆದ್ದಿರೋದು ಎಂದು ಅವರ ಪರ ಬ್ಯಾಟ್ ಬೀಸಿದರು.
ಇನ್ನು ರಾಧಾಕೃಷ್ಣ ಹಿರ್ಗಾನಾ ಪ್ರಕರಣದ ಕುರಿತಾಗಿ " ಖಂಡನೆ ಮಾಡಬೇಕಾಗಿದ್ದ ಹಿರಿಯ ರಾಜಕಾರಣಿ ಸಿದ್ದರಾಮಯ್ಯ ದೇಶದ್ರೋಹಿಗಳ ಪರ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೋಲಿಸ್ ಹಲ್ಲೆ ಮಾಡಿದ್ದಾರೆ ಎಂಬುದು ತಪ್ಪು,ಇದು ದುರ್ಧೈವ . ಸಿದ್ದರಾಮಯ್ಯನವರು ತಮ್ಮ ಹೇಳಿಕೆ ವಾಪಾಸು ಪಡೆಯುವುದು ಒಳ್ಳೆಯದು ಎಂದು ಅಬಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಯಕ್ಷಗಾನ ಕಲಾವಿದರಿಗೆ ಪರಿಹಾರ ಕೊಟ್ಟ ವಿಚಾರವಾಗಿ, ಹಿಂದೆ 16000 ಮಂದಿ ಕಲಾವಿದರಿಗೆ 3000 ರೂ ಕಳೆದ ಬಾರಿ ಪರಿಹಾರ ಕೊಟ್ಟಿತ್ತು. ಈ ವರ್ಷ ವಯೋಮಿತಿ ಕಡಿಮೆ ಮಾಡಿದ್ದು ಫಲಾನುಭವಿಗಳು ಹೆಚ್ಚಾಗುವ ನಿರೀಕ್ಷೆ ಇತ್ತು. ಆರ್ಥಿಕ ಸಂಕಷ್ಟ ಇದ್ದರೂ 20713 ಅರ್ಜಿಗಳು ಬಂದಿದ್ದು ಜಾಸ್ತಿ ಅನುದಾನ ಬೇಕಾಗಿತ್ತು. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಹಾಯ ಮಾಡುತ್ತೇವೆ ಎಂದ ಅವರು ಪ್ರತಿ ಜಿಲ್ಲೆಯಲ್ಲಿ ರಂಗಾಯಣ ಮತ್ತು ರಂಗಮಂದಿರ ಸ್ಥಾಪನೆ ಮಾಡುವ ಚಿಂತನೆ ಸರಕಾರದ ಮುಂದೆ ಇಟ್ಟಿದ್ದೇವೆ ಎಂದರು.