ಮಂಗಳೂರು, ಜು.10 (DaijiworldNews/HR): ಹೊಸ ವಧುವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿದ್ದು, ಇತ್ತ ಮನೆ ಮಂದಿ, ಕುಟುಂಭಸ್ಥರೆಲ್ಲರು ಸಂತೋಷದಲ್ಲಿದ್ದಾಗ ಅಲ್ಲಿಗೆ ಯೋಗಿ ಆದಿತ್ಯನಾಥ್ ಧಿಡೀರ್ ಭೇಟಿ ನೀಡಿದ್ದಾರೆ.
ಈ ದೃಶ್ಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ಕಂಡು ಬಂದಿದೆ.
ಆದಿತ್ಯನಾಥ್ ಅವರೊಂದಿಗೆ ಹತ್ತಾರು ಜನ ಹಿಂಬಾಲಕರು, ಭಧ್ರತಾ ಸಿಬ್ಬಂದಿ ಕೂಡಾ ಇದ್ದು, ಎಲ್ಲರೂ ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ ಯೋಗಿ ವೇದಿಕೆ ಮೇಲೇರಿ ವಧುವರರಿಗೆ ಆಶೀರ್ವದಿಸಿದ್ದಾರೆ.
ಇನ್ನು ಒಂದು ಕ್ಷಣ ಆಶ್ಚರ್ಯದಿಂದ ನೋಡುತ್ತಿದ್ದ ಜನರಿಗೆಲ್ಲಾ ಮತ್ತೆ ಗೊತ್ತಾಗಿದ್ದು, ಇದು ಯೋಗಿ ಆದಿತ್ಯನಾಥ್ ಅಲ್ಲ, ಯೋಗಿ ತರನೇ ಇರುವ ವ್ಯಕ್ತಿ ಅಂತಾ.
ದೊಡ್ಡಡ್ಕದ ರತ್ನಾವತಿ ಮತ್ತು ನಾರಾಯಣ ಎಂಬ ದಂಪತಿಯ ಪುತ್ರ ಲೋಕೇಶ್ ಬಲ್ಯಾಯ ವಿವಾಹ ಕಾರ್ಯಕ್ರಮ ಕಾವ್ಯಶ್ರೀ ಎಂಬುವರೊಂದಿಗೆ ವರನ ಮನೆಯಲ್ಲಿ ನಡೆಯುತ್ತಿದ್ದು, ಯೋಗಿಯ ಗೆಟಪ್ನಲ್ಲಿ ಬಂದು ಸರ್ಪ್ರೈಸ್ ಕೊಟ್ಟಿದ್ದು ದೊಡ್ಡಡ್ಕದ ಸುಬ್ರಹ್ಮಣ್ಯ ಬಲ್ಯಾಯ ಎಂಬುವವರು.
ಈ ಎಲ್ಲಾ ದೃಶ್ಯವನ್ನು ಛಾಯಾಗ್ರಾಹಕ ಮೋಹನ್ ಪಾಣಾಜೆ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.