ಬ್ರಹ್ಮಾವರ, ಜು 10 (DaijiworldNews/MS): ಕಾಮೇಶ್ವರ ದೇವಸ್ಥಾನದ ಹೆಸರಿಗೆ ರಿಜಿಸ್ಟರ್ ಪತ್ರದ ಮೂಲಕ ಆತ್ಮಹತ್ಯೆಗೆ ಪತ್ರ ರವಾನಿಸಿ ನಾಪತ್ತೆಯಾಗಿದ್ದ ಬೈಕಾಡಿಯ ದೇವಸ್ಥಾನದ ವಠಾರದ ನಿವಾಸಿಯಾದ ಶ್ರೀಧರ್ ಮಯ್ಯ(60) ಅವರ ಮೃತದೇಹ ಸಂತೆಕಟ್ಟೆ ಬಳಿಯ ಉಪ್ಪೂರು ನದಿಯಲ್ಲಿ ಜು.10 ರ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.
ಶ್ರೀಧರ್ ಮಯ್ಯ ಅವರ ಮೃತದೇಹವನ್ನು ಪತ್ನಿ ಮತ್ತು ಮಗಳು ಗುರುತಿಸಿದ್ದಾರೆ. ಶ್ರೀಧರ್ ಮಯ್ಯ ಅವರು ಶುಕ್ರವಾರ ನದಿಗೆ ಹಾರಿರಬಹುದು ಎಂದು ಪೊಲೀಸರು ಶಂಕಿಸಿದ್ದು , ನದಿಯಲ್ಲಿ ಮೃತದೇಹವನ್ನು ಬೆಳಿಗ್ಗೆ ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರ ಸಹಾಯದಿಂದ ಶವವನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಹೆಚ್ಚಿನ ಓದಿಗಾಗಿ - ಬ್ರಹ್ಮಾವರ: ನಾಪತ್ತೆಯಾದ ವ್ಯಕ್ತಿಯಿಂದ ದೇವಸ್ಥಾನದ ವಿಳಾಸಕ್ಕೆ ಆತ್ಮಹತ್ಯೆ ಪತ್ರ - ಮುಂದುವರಿದ ಹುಡುಕಾಟ