ಕಾರ್ಕಳ, ಜು.09 (DaijiworldNews/HR): ನಗರದ ಕ್ರೈಸ್ಟ್ಕಿಂಗ್ ಚರ್ಚ್ನ ಧರ್ಮಗುರುಗಳು ಹಾಗೂ ಕಾರ್ಕಳ ವಲಯದ ಆದ್ಯಾತ್ಮಿಕ ಗುರುಗಳಾದ ವಂದನೀಯ ಜೋಸ್ವಿ ಫೆರ್ನಾಂಡಿಸ್ ಅವರು ಕಾರ್ಕಳದಲ್ಲಿ ಕಳೆದ 6 ವರ್ಷಗಳಿಂದ ಸೇವೆಗೈದಿದ್ದು ಇದೀಗ ಎರ್ಮಾಳ್ ಚರ್ಚಿಗೆ ವರ್ಗಾವಣೆಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರನ್ನು ಬೀಳ್ಕೊಡುವ ಕಾರ್ಯಕ್ರಮವನ್ನು ಕಾರ್ಕಳ ಚರ್ಚ್ ಹಾಲಿನಲ್ಲಿ ನೆರವೇರಿಸಲಾಯಿತು.
ಕಾರ್ಕಳ ಚರ್ಚಿನ ಸರ್ವತೋಮುಖ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿ ಸರ್ವಧರ್ಮದ ಜನರ ಮನಗೆದ್ದ ಅವರಿಗೆ ಶಾಲು, ಫಲಪುಷ್ಪ, ಹಾರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಚರ್ಚ್ನ ಪಾಲನಾ ಮಂಡಲಿಯ ಉಪಾಧ್ಯಕ್ಷ ಆಂಟನಿ ಆರಾನ್ಹ ಸ್ವಾಗತಿಸಿದರು. ಸಿಸ್ಟರ್ ಸುಪೀರಿಯರ್ ಸಹೋದರಿ ಪೇಟ್ರಿ ಧರ್ಮಗುರು ಕುರಿತು ಗುಣಗಾನ ಮಾಡಿದರು. ಪಾಲನಾ ಮಂಡಲಿಯ ಕಾರ್ಯದರ್ಶಿ ಲವೀನಾ ಪಿರೇರಾ ವಂದಿಸಿದರು.