ಕಾರ್ಕಳ, ಜು.09 (DaijiworldNews/HR): ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಛೇರಿ ಸಹಾಯಕರಾಗಿದ್ದ ಸುಬ್ರಹ್ಮಣ್ಯ ಬೈಪಾಡಿತ್ತಾಯ ಅವರು ನಿವೃತ್ತಿ ಹೊಂದಿದ ನಿಮಿತ್ತ ಆರೋಗ್ಯ ಕೇಂದ್ರದಲ್ಲಿ ಬೀಳ್ಕೊಡುಗೆ ಸಮಾರಂಭ ನೆರವೇರಿತು.
ಆಡಳಿತ ವೈದ್ಯಾಧಿಕಾರಿ ಡಾ. ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದು, ವೈದ್ಯ ಡಾ. ರಾಜಗೋಪಾಲ ಭಂಡಾರಿ, ಡಾ. ಹಸನ್ ಸರ್ಫರಾಜ್, ಡಾ. ನಿಖಿಲ್ ಶೆಟ್ಟಿ, ಮಕ್ಕಳ ತಜ್ಞ ಡಾ. ಸುರೇಶ್ ಕುಡ್ವ ಆರೋಗ್ಯ ಸಹಾಯಕಿಯರಾದ ಪುಷ್ಪಲತಾ, ಶಶಿಕಲಾ ಶುಭ ಕೋರಿದರು.
ಇಲಾಖೆಯ 37 ವರ್ಷದ ಸೇವಾ ಅವಧಿಯ ಸಂದರ್ಭ ನೆರವು ನೀಡಿದ ಎಲ್ಲ ಅಧಿಕಾರಿಗಳು ಮತ್ತು ಸಹುದ್ಯೋಗಿ ಮಿತ್ರರಿಗೆ ಸುಬ್ರಹ್ಮಣ್ಯ ಬೈಪಾಡಿತ್ತಾಯ ಕೃತಜ್ಞತೆ ಅರ್ಪಿಸಿದರು.