ಬ್ರಹ್ಮಾವರ, ಜು.09 (DaijiworldNews/HR): ಮನೆ ಬಿಟ್ಟು ತೆರಳಿದ ದಿನವೇ ವ್ಯಕ್ತಿಯೊಬ್ಬರು ಸ್ಥಳೀಯ ದೇವಸ್ಥಾನದ ವಿಳಾಸಕ್ಕೆ ಆತ್ಮಹತ್ಯೆ ಪತ್ರವನ್ನು ರಿಜಿಸ್ಟ್ರರ್ ಪೋಸ್ಟ್ ನಲ್ಲಿ ಕಳುಹಿಸಿದ ಘಟನೆ ವರದಿಯಾಗಿದೆ.
ನಾಪತ್ತೆಯಾದವರನ್ನು ಬ್ರಹ್ಮಾವರ ತಾಲೂಕಿನ ಕಾಮೇಶ್ವರ ದೇವಸ್ಥಾನ ವಠಾರ, ಬೈಕಾಡಿ ಗ್ರಾಮದಲ್ಲಿ ಶ್ರೀಧರ್ ಮಯ್ಯ(60) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಶ್ರೀಧರ್ ಮಯ್ಯ ಅವರು ಜುಲೈ 8 ರಂದು ಸಂಜೆ 5.15 ರ ಸುಮಾರಿಗೆ ತಮಗೆ ಕೋರ್ಟ್ ಕೇಸ್ ಇದ್ದು, ಚಿಕ್ಕಮಗಳೂರಿಗೆ ಹೀಗುತ್ತಿದ್ದು ನಾಲ್ಕು ದಿನ ಬಿಟ್ಟು ಬರುತ್ತೇನೆ ಎಂದು ಹೇಳಿ ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟು ತೆರಳಿದ್ದರು. ಆದರೆ ಅದೇ ದಿನ ಸಂಜೆ ಅದೇ ದಿನ ಸಂಜೆ 6.30 ರ ಸುಮಾರಿಗೆ ಕಾಮೇಶ್ವರ ದೇವಸ್ಥಾನದ ಹೆಸರಿಗೆ ಶ್ರೀಧರ ಮಯ್ಯರವರು ಬರೆದ ಒಂದು ರಿಜಿಸ್ಟರ್ ಪತ್ರ ಬಂದಿದ್ದು, ಅದರಲ್ಲಿ ನನ್ನ ಆರೋಗ್ಯ ತುಂಬಾ ಕೆಳಮಟ್ಟದಲ್ಲಿದೆ, ವಿಪರೀತ ಕಾಲು ನೋವು ಹಾಗೂ ವಿಪರೀತ ಬಿಕ್ಕಳಿಕೆಯಿಂದಾಗಿ ಮನಸ್ಸಿಗೆ ಜಿಗುಪ್ಸೆಗೊಂಡು ನನಗೆ ಜೀವವೇ ಬೇಡವಾಗಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವುದಾಗಿ ದೇವಸ್ಥಾನದ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಶ್ರೀಧರ್ ಮಯ್ಯ ಅವರ ಪುತ್ರಿ ನವ್ಯಾ ಉಡುಪಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಮನೆಯವರು ಹಾಗೂ ಗ್ರಾಮಸ್ಥರು ಸೇರಿ ಶ್ರೀಧರ್ ಮಯ್ಯ ಅವರನ್ನು ಎಲ್ಲಾ ಕಡೆ ಹುಡುಕಿದರು ಅವರು ಪತ್ತೆಯಾಗಲಿಲ್ಲ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.