ಉಡುಪಿ, ಜು.08 (DaijiworldNews/HR): ಚುನಾವಣೆಯ ಸಂಧರ್ಭದಲ್ಲಿ ಮಾತ್ರ ರಾಜಕೀಯ ಪಕ್ಷದವರು ನಮ್ಮ ಬಳಿ ಬರುತ್ತಾರೆ. ನಮ್ಮ ಕಷ್ಟಕಾಲದ ಸಹಾಯಕ್ಕೆ ಯಾವ ಪಕ್ಷವರು ಇಲ್ಲ ಎಂದು ಕಾಂಗ್ರೆಸ್ ಮುಖಂಡ ನಲಪಾಡ್ ಅವರನ್ನು ಮೀನುಗಾರ ಮಹಿಳೆಯರು ತರಾಟೆಗೆ ತೆಗೆದುಕೊಂದಿದ್ದಾರೆ.
ನಲಪಾಡ್ ಅವರು ಮಲ್ಪೆ ಬಂದರಿಗೆ ಮತ್ತು ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮೀನು ಮಾರಾಟಗಾರರ ಜೊತೆ ಮಾತನಾಡಿ, ಮೀನುಗಾರರ ಸಮಸ್ಯೆ ಆಲಿಸಿದ್ದಾರೆ.
ಎಲ್ಲ ಪಕ್ಷದವರೂ ಒಂದೇ ಆಗಿದ್ದು, ಮೀನುಗಾರರಿಗೆ ಯಾವ ರಾಜಕೀಯ ಪಕ್ಷದಿಂದಲೂ ಪ್ರಯೋಜನವಾಗಿಲ್ಲ ಹಾಗಾಗಿ ನಾವು ಯಾರಿಗೂ ಸಪೋರ್ಟ್ ಕೊಡುವುದಿಲ್ಲ, ನಾವು ದುಡಿದು ತಿನ್ನುತ್ತೇವೆ ಎಂದು ಮೀನುಗಾರ ಮಹಿಳೆಯರು ಹೇಳಿದ್ದಾರೆ.
ಇನ್ನು "ಕೊರೊನಾದಿಂದಾಗಿ ಮೀನು ವ್ಯಾಪಾರಕ್ಕೆ ಪಟ್ಟು ಬಿದ್ದಿದ್ದು, ವ್ಯಾಪಾರ ಆಗುತ್ತಿಲ್ಲ ಎಂದು ಮೀನು ವ್ಯಾಪಾರಸ್ಥರು ತಮ್ಮ ನೋವನ್ನು ನಲಪಾಡ್ ಅವರೊಂದಿಗೆ ಹಂಚಿಕೊಂಡಿದ್ದು, ಈ ವೇಳೆ ತಮ್ಮ ಜೇಬಿನಿಂದ ಹಣ ತೆಗೆದು ಬರೋಬ್ಬರಿ 100 ಕೆಜಿ ಮೀನುಗಳನ್ನು ಕರಿದಿಸಿದ್ದಾರೆ" ಎಂದು ತಿಳಿದು ಬಂದಿದೆ.