ಕಾಸರಗೋಡು, ಜು 08 (DaijiworldNews/MS): ಕಾಸರಗೋಡು ನೂತನ ಜಿಲ್ಲಾಧಿಕಾರಿಯನ್ನಾಗಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ರವರನ್ನು ನೇಮಿಸಲಾಗಿದೆ. ಹಾಲಿ ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ರವರವರನ್ನು ನಾಗರಿಕ ಪೂರೈಕೆ ಇಲಾಖಾ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಕೈಗಾರಿಕಾ ಇಲಾಖಾ ನಿರ್ದೇಶಕರಾಗಿದ್ದ ಭಂಡಾರಿ ಸ್ವಾಗತ್ ಕಾಸರಗೋಡಿನ 24 ನೇ ಜಿಲ್ಲಾಧಿಕಾರಿ ಯಾಗಿದ್ದು , ಮಾತ್ರವಲ್ಲ ಪ್ರಥಮ ಬಾರಿಗೆ ಕಾಸರಗೋಡಿಗೆ ಮಹಿಳಾ ಜಿಲ್ಲಾಧಿಕಾರಿಯನ್ನು ನೇಮಿಸಲಾಗಿದೆ . 2010 ಬ್ಯಾಚ್ ನ ಐ ಎ ಎಸ್ ಉದ್ಯೋಗಿಯಾಗಿರುವ ಭಂಡಾರಿ ಸ್ವಾಗತ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 69 ನೇ ರ್ಯಾಂಕ್ ಪಡೆದುಕೊಂಡಿದ್ದರು .
2018 ರ ಜುಲೈ 18 ರಂದು ಕಾಸರಗೋಡು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಜಿತ್ ಬಾಬು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು , ದಕ್ಷ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು