ಕಾರ್ಕಳ, ಜು. 07 (DaijiworldNews/SM): ಅತ್ತೂರಿನ ಸೇಂಟ್ ಲಾರೆನ್ಸ್ ಮೈನರ್ ಬೆಸಿಲಿಕಾದ ರೆಕ್ಟರ್ ಆಗಿ ಫಾ. ಆಲ್ಬನ್ ಡಿಸೋಜಾ ಅವರು ನೇಮಕಗೊಂಡಿದ್ದು, ಮೈನರ್ ಬೆಸಿಲಿಕಾದಲ್ಲಿ ಸೇವೆ ಆರಂಭಿಸಿದ್ದಾರೆ.
ಫಾ. ಅಲ್ಬನ್ ಈ ಹಿಂದೆ ಕಲ್ಮಾಡಿಯ ಸ್ಟೆಲ್ಲಾ ಮೇರಿಸ್ ಚರ್ಚ್ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಕಲ್ಮಾಡಿಯಲ್ಲಿ ಹೊಸ ದೋಣಿ ಆಕಾರದ ಚರ್ಚ್ ನಿರ್ಮಿಸಲು ಮತ್ತು ದೇವಾಲಯವನ್ನು ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಊರ ಪರವೂರ ಕ್ರೈಸ್ತರು ಮಾತ್ರವಲ್ಲದೆ ಅನ್ಯ ಧರ್ಮದ ಭಕ್ತರಿಗೆ ಕ್ಷೇತ್ರದ ಮೂಲಕ ನೆಮ್ಮದಿ ಸಿಗುವಂತೆ ನಿತ್ಯ ಪ್ರಾರ್ಥನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದವರು ಫಾ. ಅಲ್ಭನ್.
ಮೈನರ್ ಬೆಸಿಲಿಕಾಕ್ಕೆ ವರ್ಗಾವಣೆಗೊಂಡ ಅವರು ಬುಧವಾರದಂದು ಕ್ಷೇತ್ರಕ್ಕೆ ತೆರಳಿದರು. ಆ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯ ಭಕ್ತರು ಅದ್ದೂರಿಯಾಗಿ ಗುರುಗಳನ್ನು ಸ್ವಾಗತಿಸಿದರು. ಇನ್ನು ಈ ಹಿಂದೆ ಕ್ಷೇತ್ರದ ರೆಕ್ಟರ್ ಆಗಿದ್ದ ಫಾ. ಜಾರ್ಜ್ ಥಾಮಸ್ ಡಿಸೋಜಾ ಅವರು ವರ್ಗಾವಣೆಗೊಂಡಿದ್ದು, ಸಮಾರಂಭದಲ್ಲಿ ಉಪಸ್ಥಿತರಿದ್ದರು.