ಮಂಗಳೂರು, ಜು 07 (DaijiworldNews/MS): ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೋರ್ವ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನೋಡಿದ ವ್ಯಕ್ತಿಯೋರ್ವ ಶಾಕ್ ಗೆ ಒಳಗಾಗಿ ಹೃದಯಾಘಾತ ಸಾವನ್ನಪ್ಪಿದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜು.೦೭ರ ಮಂಗಳವಾರ ನಡೆದಿದೆ.
ನೀರುಪಾಲಾಗಿ ಸಾವನ್ನಪ್ಪಿದ್ದ ವ್ಯಕ್ತಿಯನ್ನು ಜೋಕಿಂ ಮಸ್ಕರೇನಸ್ (58) ಎಂದು ಗುರುತಿಸಲಾಗಿದೆ, ಇವರು ತಮ್ಮ ಮನೆಯವರೊಂದಿಗೆ ಮಾಯಿಲದ ಆವೆ ಮಣ್ಣಿನ ಪಾಯದಲ್ಲಿ ಮೀನು ಹಿಡಿಯಲೆಂದು ಹೋಗಿದ್ದರು. ಈ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದು ಜೋಕಿಂ ಸಾವನ್ನಪ್ಪಿದ್ದಾರೆ.
ಈ ಎಲ್ಲಾ ಘಟನೆ ಗಮನಿಸುತ್ತಿದ್ದ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಅಘಾತಕ್ಕೆ ಒಳಗಾಗಿ ಹೃದಯಾಘಾತವಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇವರ ಗುರುತು ತಿಳಿದುಬಂದಿಲ್ಲ.
ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.