ಉಡುಪಿ, ಜು 07 (DaijiworldNews/PY): "ಉಪಕಾರವನ್ನು ಎಂದಿಗೂ ಧರ್ಮದಿಂದ ಮಾಡಬೇಕು. ಅದರಿಂದ ಯಾವುದೇ ಪ್ರತಿಫಲವನ್ನು ಇಟ್ಟುಕೊಳ್ಳಬಾರದು. ಮಾನವನ ಸೇವೆಯೇ ಮಾಧವನ ಸೇವೆ" ಎಂದು ಕೆಪಿಸಿಸಿ ರಾಜ್ಯಾಾಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಡಿಕೆಶಿ ಅಭಿಮಾನಿಗಳ ಸಂಘದ ವತಿಯಿಂದ ಕೆಪಿಸಿಸಿ ಸಾರಥ್ಯ ವಹಿಸಿಕೊಂಡು ಒಂದು ವರ್ಷ ಅವಧಿಯ ಸಂಭ್ರಮದಲ್ಲಿ ಬಡ ಹಾಗೂ ಮಧ್ಯಮ ವರ್ಗದ 1,000 ಜನರಿಗೆ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಮಂಗಳವಾರ ಮಥುರಾ ಛತ್ರದಲ್ಲಿ ಚಾಲನೆ ನೀಡಿ, ಫಲಾನುಭವಿಗಳಿಗೆ ಕಿಟ್ ವಿತರಿಸಿ ಮಾತನಾಡಿದರು.
"ತಾನು ಸಂಪಾದಿಸಿದ ಹಣದಿಂದ ಬಡವರಿಗೆ ಕಿಟ್ ವಿತರಣೆ ಮಾಡುತ್ತಿಿರುವುದು ಸಂತಸದ ವಿಚಾರ. ಪಕ್ಷದಲ್ಲಿ ಅಧಿಕಾರದಲ್ಲಿ ಇರದೆ ಇದ್ದರೂ ಸಹ ಕಾರ್ಯಕರ್ತರು ಜನಸೇವೆ ಮುಂದಾಗಿದ್ದಾರೆ. 1,000 ಮಂದಿಗೆ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ" ಎಂದರು.
"ಕೊರೊನಾ ಅನೇಕರು ಮನೆಯಲ್ಲಿ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಸರಕಾರದಿಂದ ಸಿಗುವ ಪರಿಹಾರ ಧನವನ್ನು ತಲುಪಿಸುವ ಪ್ರಯತ್ನ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬಳಿ ಅರ್ಜಿಗಳು ಸಿಗಲಿದೆ" ಎಂದರು.
ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಯುವ ಕಾಂಗ್ರೆಸ್ ಹ್ಯಾರೀಸ್ ನಲ್ಪಾಡ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಕಾಂಗ್ರೆಸ್ ಪದಾಧಿಕಾರಿಗಳಾದ ವೆರೋನಿಕ ಕರ್ನೇಲಿಯೋ, ಅಮೃತಾ ಕೃಷ್ಣಮೂರ್ತಿ, ದೀಪಕ್ ಕೋಟ್ಯಾನ್, ಪ್ರಖ್ಯಾತ್ ಶೆಟ್ಟಿ, ಮಮತಾ ಶೆಟ್ಟಿ, ಡಾ ಸುನೀತಾ ಶೆಟ್ಟಿ, ಕಿಶನ್ ಹೆಗ್ಡೆ ಕೆ., ಹಬೀಬ್ ಆಲಿ, ಗೀತಾ ವಾಗ್ಲೆ, ನವೀನ್ ಶೆಟ್ಟಿ, ಸೆಲೀನಾ ಕರ್ಕಡ, ಹರೀಶ್ ಶೆಟ್ಟಿ, ಪ್ರಶಾಂತ್ ಜತ್ತನ್ನ, ನವೀನ್ ಶೆಟ್ಟಿ, ಶ್ಯಾಾಮಲಾ ಸುಧಾಕರ್, ವಿಜಯ ಪೂಜಾರಿ, ವಿನಯ ರಾಜ್, ಅನಿಲ್ ಕುಮಾರ್, ಹರೀಶ್ ಕಿಣಿ, ಚರಣ್ ರಾಜ್ ಬಂಗೇರಾ, ಸೌರಭ್ ಬಲ್ಲಾಳ್, ಯುವರಾಜ್ ಪುತ್ತೂರು, ಮೊಹ್ಮದ್ ಜಮೀರ್, ಸಂಧ್ಯಾ ತಿಲಕ್, ಲತಾ ಆನಂದ್ ಶೇರಿಗಾರ್, ಗುರುಪ್ರಸಾದ್, ಶರತ್ ಶೆಟ್ಟಿ, ಸಂದೇಶ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣ ಮೂರ್ತಿ ಆಚಾರ್ಯ ಸ್ವಾಗತಿಸಿದರು. ಸತೀಶ್ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.