ಮಂಗಳೂರು, ಜು 07 (DaijiworldNews/PY): ಬಿಲ್ಲವ ವಾರಿಯರ್ಸ್ ತಂಡ ಒಂದು ವರ್ಷ ಪೂರೈಸಿದ ಹಿನ್ನೆಲೆ ತಂಡವು ಬಡ ಕುಟುಂಬಗಳಿಗೆ ಆಹಾರ ಕಿಟ್ಗಳನ್ನು ನೀಡಿದೆ.
ಈ ತಂಡ ಈಗಾಗಲೇ ನೊಂದ ಕುಟುಂಬವೊಂದಕ್ಕೆ ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯವನ್ನು ಕೂಡಾ ಮಾಡಿದೆ. ಕೊರೊನಾದ ಸಂಕಷ್ಟದ ನಡುವೆ ಈ ತಂಡ ಮಾಡುವ ಮಾನವೀಯ ಕಾರ್ಯ ಇತರರಿಗೆ ಮಾದರಿಯಾಗಿದೆ.
2020ರ ಜೂನ್ 30ರಂದು ಬಿಲ್ಲವ ವಾರಿಯರ್ಸ್ ತಂಡ ರೂಪುಗೊಂಡಿದ್ದು, ಪ್ರವೀಣ್ ಪೂಜಾರಿ, ಪುಷ್ಪ ರಾಜ್ ಪೂಜಾರಿ ಹಾಗೂ ದಯಾನಂದ್ ಕುಕ್ಕಾಜೆ ಅವರು ಬಿಲ್ಲವ ವಾರಿಯರ್ಸ್ ತಂಡದ ನೇತೃತ್ವ ವಹಿಸಿದ್ದಾರೆ.
ಬಿಲ್ಲವ ವಾರಿಯರ್ಸ್ ತಂಡದಿಂದ ಸಂದೇಶ: "ಜನ ಯಾವತ್ತೂ ನಮ್ಮ ಬೆಂಬಲವಾಗಿ ಇರುತ್ತಾರೆ ಎಂಬ ಧೈರ್ಯದಿಂದ ನಾವು ನಿರಂತರ ಸೇವೆ ಮಾಡುತ್ತೇವೆ" ಎನ್ನುವ ಸಂದೇಶ ನೀಡಿದೆ.