ಉಡುಪಿ, ಜು 07 (DaijiworldNews/MS): ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ˌಉಡುಪಿ ಬ್ಲಾಕ್ ಸಮಿತಿ ˌ ಜಿಲ್ಲಾ ಎನ್.ಎಸ್.ಯು.ಐ. ಹಾಗೂ ಯುವ ಕಾಂಗ್ರೆಸ್ ಸಹಯೋಗದೊಂದಿಗೆ ಜಿಲ್ಲಾ ಕಾಂಗ್ರೆಸ್ ಭವನದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬೆಲೆ ಏರಿಕೆ ವಿರುದ್ಧ ಸೈಕಲ್ ಜಾಥಾವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
ಸೈಕಲ್ ಜಾಥಾ ಕ್ಕೆ ಮಾಜಿ ಮಂಗಳೂರು ಮೇಯರ್ ಶಶಿಧರ ಹೆಗ್ಡೆ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ' ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 10 ವರ್ಷ ಅತ್ಯುತ್ತಮ ಆಡಳಿತ ನೀಡಿದ್ದರು. ಆದರೆ ನಂತರ ಬಂದ ಎನ್ ಡಿ ಎ ಸರ್ಕಾರ ಆಡಳಿತ ವಿರೋಧಿಯಾಗಿದೆ. ತೈಲ ಬೆಲೆ ಕಡಿಮೆ ಮಾಡುತ್ತೇವೆ ಚುನಾವಣಾ ಸಂದರ್ಭದಲ್ಲಿ ಹೇಳಿದ ಮಾತು ಹೇಳಿಕೆಯಾಗಿಯೇ ಉಳಿದಿದೆ. ಇದರ ಪರಿಣಾಮ ಜನತೆಗೆ ವಾಸ್ತವ ಅರಿವಾಗಿದೆ. ಕಾಂಗ್ರೆಸ್ ಕಾಲದಲ್ಲಿ ಇದ್ದ ಹಿಂದಿನ ಅಚ್ಚೆ ದಿನ್ ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈಗ ಉದ್ಯೋಗ ವ್ಯಾಪಾರ ಇಲ್ಲ. ಇನ್ನೊಂದು ಕಡೆ ದಿನಬಳಕೆಯ ವಸ್ತುಗಳ ಬೆಲೆ, ಇಂಧನ ಬೆಲೆ ಏರಿಕೆ ಆಗುತ್ತಲೇ ಇದೆ. ಈ ಸರಕಾರದ ಆಡಳಿತ ವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಮಾತ್ರವಲ್ಲದೆ ಕೊರೊನಾ ದಿಂದ ಸಂಕಷ್ಟದಲ್ಲಿ ಇರುವ ಜನರಿಗೆ ಮುಂದಿನ ಒಂದು ತಿಂಗಳು ಕೆಪಿಸಿಸಿ ಜನತೆಗೆ ಸಹಾಯ ಹಸ್ತ ನೀಡಲು ಮುಂದಾಗಿದೆ ಎಂದರು
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಅಶೋಕ್ ಕುಮಾರ್ ಕೊಡವೂರು, ಅಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ, ದೀಪಕ್ ಕೋಟ್ಯಾನ್, ಅಧ್ಯಕ್ಷರು, ಜಿಲ್ಲಾ ಯುವ ಕಾಂಗ್ರೆಸ್, ಎನ್ ಐ ಸಿಯು ಘಟಕದ ಜಿಲ್ಲಾ ಅದ್ಯಕ್ಷ ಸೌರಭ್ ಬಲ್ಲಾಳ್, ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಧ್ಯಕ್ಷರು, ಗೀತಾ ವಾಗ್ಳೆ, ಮಹಿಳಾ ಕಾಂಗ್ರೆಸ್ ಘಟಕ, ಪ್ರಶಾಂತ್ ಜತ್ತನ್ನ, ನಾಗೇಶ್ ಉದ್ಯಾವರ, ಪ್ರಮೀಳಾ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.