ಮಂಗಳೂರು, ಜು 07 (DaijiworldNews/MS): ಕೊರೋನ ನಿಯಂತ್ರಣ ಉದ್ದೇಶದಿಂದ ಹೇರಲಾಗಿರುವ ರಾತ್ರಿ ಕರ್ಪ್ಯೂ ಯನ್ನು ಉಲ್ಲಂಘಿಸಿ ಸೋಮವಾರ ತಡರಾತ್ರಿ ಅನಗತ್ಯವಾಗಿ ಸಂಚರಿಸುತ್ತಿದ್ದ ಒಟ್ಟು ಏಳು ಮಂದಿ ವಿರುದ್ಧ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಬಿಜೈ ಆನೆಗುಂಡಿ ಬಳಿ ಆಟೋರಿಕ್ಷಾದಲ್ಲಿ ತಿರುಗಾಡುತ್ತಿದ್ದ ಇಬ್ಬರು, ಮಲ್ಲಿಕಟ್ಟೆ ಬಳಿ ಬೈಕಿನಲ್ಲಿ ತೆರಳುತ್ತಿದ್ದ ಮೂವರು ಹಾಗೂ ಕಾರಿನಲ್ಲಿ ತಿರುಗಾಡುತ್ತಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.