ಪುತ್ತೂರು, ಜು 07 (DaijiworldNews/MS): ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಬಂಧಿಸಲ್ಪಟ್ಟ ಮೂವರು ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಮಧ್ಯಾಂತರ ಜಾಮೀನು ನೀಡಿದೆ.
ಆರೋಪಿಗಳಾದ ನೆಟ್ಟಣಿಗೆ ನಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ನಿವಾಸಿ ಶಾಫಿ (34),, ಸವಣೂರು ಗ್ರಾಮದ ಮತ್ತಿಕೆರೆಯ ಮಹಮ್ಮದ್ ಅಝರುದ್ದೀನ್(30 , ಸವಣೂರು ಗ್ರಾಮದ ಮಾಂತೂರಿನ ಅಂಬೇಡ್ಕರ್ ಭವನದ ಬಳಿಯ ನಝೀರ್ (38) ಅವರಿಗೆ ಪುತ್ತೂರು ಅಡಿಷನಲ್ ಹಿರಿಯ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ನ್ಯಾಯಾಧಿಕಾರಿ ನ್ಯಾಯಾಲಯ ಮಧ್ಯಂತರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನಜೀರ್ ಪರ ನೂರುದ್ದಿನ್ ಸಾಲ್ಮರ, ಮಹಮ್ಮದ್ ಶಾಫಿ ಪರ ಪ್ರಸಾದ ರೈ ಕುಂಬ್ರ ಅಜರ ಪರ ಸಿದ್ದಿಕ್ ಮಂಗಳೂರು ವಾದಿಸಿದ್ದರು