ಕಾಸರಗೋಡು, ಜು 07 (DaijiworldNews/MS): ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿಯವರ ಕಸ್ಟಡಿ ಮರಣ ಹಾಗೂ ಮಾನವೀಯ ದಯೆಯನ್ನು ನಿರಾಕರಿಸಿದ ಆಡಳಿತ ವರ್ಗದ ಕ್ರಮವನ್ನು ಪ್ರತಿಭಟಿಸಿ ಕೊಲ್ಲಂಗಾನ ಸಂತ ಥೋಮಸ್ ಚರ್ಚ್ ನ ಐ ಸಿ ವೈ ಎಂ ಘಟಕದ ನೇತೃತ್ವದಲ್ಲಿ ಮಂಗಳವಾರ ಸಂಜೆ ಕೊಲ್ಲಂಗಾನ ದಲ್ಲಿ ಪ್ರತಿಭಟನೆ ನಡೆಯಿತು . ಮೊಂಬತ್ತಿ ಉರಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕೋವಿಡ್ ಮಾನದಂಡ ಪಾಲಿಸಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಮಂದಿ ಪಾಲ್ಗೊಂಡಿದ್ದರು ಚರ್ಚ್ ಧರ್ಮಗುರು ಫಾ. ರಿತೇಶ್ ರೊಡ್ರಿಗಸ್ ಹಾಗೂ ಚರ್ಚ್ ನ ಪದಾಧಿಕಾರಿಗಳು , ಐಸಿವೈ ಎಂ ಘಟಕ ಪಧಾಧಿಕಾರಿ ಗಳು ನೇತೃತ್ವ ನೀಡಿದರು.