ಕುಂದಾಪುರ, ಜು.06(DaijiworldNews/HR): ಹಂಗಳೂರು ವಿನಾಯಕ ಥಿಯೇಟರ್ ಹತ್ತಿರದ ವಿನ್ಸೆಂಟ್ ಡಿ'ಸೋಜ ಎನ್ನುವವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಹತ್ತಿಕೊಂಡ ಬೆಂಕಿ ಮನೆ ಹಾಗೂ ಮನೆಯಲ್ಲಿದ್ದ ಗ್ರಹೋಪಕರಣ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿ ಆದ ಘಟನೆ ಜು.6 ಮಂಗಳವಾರ ಸಂಭವಿಸಿದ್ದು, ಮನೆ ಮಾಲೀಕ ವಿನ್ಸೆಂಟ್ ಡಿಸೋಜ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿನ್ಸೆಂಟ್ ಡಿಸೋಜ ಒಬ್ಬರೆ ಮನೆಯಲ್ಲಿ ವಾಸಿಸುತ್ತಿದ್ದು ಬೆಳಿಗ್ಗೆ ಅನ್ನ ಮಾಡಿ ಸಿಲಿಂಡರ್ ಖಾಲಿಯಾಗಿದೆ ಎಂದು ಬೇರೆ ಸಿಲಿಂಡರ್ ಸಂಪರ್ಕಿಸಿ ಪೇಟೆ ಕಡೆ ಬಂದಿದ್ದರು. ಮರಳಿ ಮನೆಗೆ ಹೋಗಿ ಗ್ಯಾಸ್ ಹತ್ತಿಸಿದಾಗ ಆಗಲೇ ಗ್ಯಾಸ್ ಸೋರಿಕೆಯಾಗಿದ್ದು ಏಕಾಏಕಿ ಬೆಂಕಿ ಹೊತ್ತಿಕೊಂಡು ಮನೆ ಮೇಲ್ಚಾವಣಿ, ಪ್ರಿಜ್, ಒವೆನ್, ಸೋಪಾಸೆಟ್ ಸಹಿತ ಗ್ರಹೋಪಕರಣ ವಸ್ತುಗಳೆಲ್ಲ ಬೆಂಕಿಗೆ ಆಹುತಿ ಆಗಿದೆ.
ಇನ್ನು ವಿನ್ಸೆಂಟ್ ಡಿ'ಸೋಜ ಅವರಿಗೂ ಬೆಂಕಿಯಿಂದ ಸಣ್ಣಪುಟ್ಟ ಸುಟ್ಟಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸುಮಾರು ರೂ. 2 ಲಕ್ಷ ಕ್ಕೂ ಹೆಚ್ಚು ಹಾನಿ ಉಂಟಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ನವರು, ಗ್ಯಾಸ್ ಏಜೆನ್ಸಿಯವರು ಭೇಟಿ ನೀಡಿದ್ದಾರೆ.