ಕಾರ್ಕಳ, ಜು.06(DaijiworldNews/HR): ಜನಪರ ಕಾಳಜಿ ಕ್ರಿಯಾಶೀಲ ಚಿಂತನೆಗಳು ಎರಡನೇ ಅಲೆಯನ್ನು ಸಮರ್ಪಕವಾಗಿ ಎದುರಿಸಿ ಯಶಸ್ಸನ್ನು ಸಾಧಿಸುವಲ್ಲಿ ಸಹಕಾರಿಯಾಗಿದೆ. ಮೂರನೆಯದಾಗಿ ನಡೆಸುತ್ತಿರುವ ಮಕ್ಕಳ ಆರೋಗ್ಯ ತಪಾಸಣಾ ಶಿಬಿರದ ವಾತ್ಸಲ್ಯ ಹೆಸರೇ ಎಲ್ಲರಲ್ಲೂ ಆತ್ಮವಿಶ್ವಾಸ ತುಂಬುತ್ತದೆ ಎಂದು ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಹೇಳಿದರು.
ನಿಟ್ಟೆ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ ವಾತ್ಸಲ್ಯ ಮಕ್ಕಳ ಆರೋಗ್ಯ ತಪಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯರ 7 ತಂಡಗಳಿದ್ದು ಒಟ್ಟು 202 ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು.
ನಿಟ್ಟೆ ವಿದ್ಯಾಸಂಸ್ಥೆಯ ರಿಜಿಸ್ಟ್ರಾರ್ ಯೋಗೀಶ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲನಿರಂಜನ್ ಎನ್. ಚಿಪ್ಲೂಂಕರ್, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹರೀಶ್ ಆಚಾರ್ಯ, ಡಾ. ಸುರೇಶ್ ಕುಡ್ವ, ಡಾ. ನಂಜೇಶ್,ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಸುಮಿತ್ರ,ವಾತ್ಸಲ್ಯ ಕಾರ್ಯಕ್ರಮದ ಸಂಯೋಜಕ ಸುಮಿತ್ ಶೆಟ್ಟಿ ಕೌಡೂರು, ರೇಷ್ಮಾ ಶೆಟ್ಟಿ, ಲಕ್ಷ್ಮಣ್ ಆಚಾರ್ಯ ನವೀನ್ ನಾಯಕ್, ಜಯರಾಮ್ ಸಾಲಿಯಾನ್, ಪ್ರವೀನ್ ಸಾಲಿಯನ್, ಹರ್ಷವರ್ಧನ ನಿಟ್ಟೆ, ಬಾಲಕೃಷ್ಣ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.