ಕಾರ್ಕಳ, ಜು 06 (DaijiworldNews/MS): ಜನಸೇವೆಯೇ ದೇವರ ಸೇವೆ. ಸೇವೆಯ ಮೂಲಕ ದೇವರರನ್ನು ಒಲಿಯಬಹುದು. ತನ್ಮೂಲಕ ಸಂತೃಪ್ತಿ ಪ್ರಾಪ್ತಿಯಾಗುತ್ತದೆ. ಕಷ್ಟ-ಕಾರ್ಪಣ್ಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಾಗೂ ಮನಶಾಂತಿಗಾಗಿ ಅಗಮಿಸುವ ಭಕ್ತಾದಿಗಳಿಗೆ ಪುಣ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯ ಒದಗಿಸುವುದು ಸೇವಾ ಕಾರ್ಯವಾಗಿದೆ. ಅತ್ತೂರು ಪುಣ್ಯ ಕ್ಷೇತ್ರವು ವಿಶ್ವಮಟ್ಟದಕ್ಕೇರಿದ ಆ ಕ್ಷಣವು ನನ್ನ ಪಾಲಿಗೆ ಒದಗಿ ಬಂದ ಸ್ಮರಣೀಯವಾಗಿದೆ ಎಂದು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ನಿರ್ದೇಶಕ ಧರ್ಮಗುರು ಜೋರ್ಜ್ ತೋಮಸ್ ಡಿ’ಸೋಜ ಹೇಳಿದರು.
ಐತಿಹಾಸಿಕ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ನಿರ್ದೇಶಕ, ಧರ್ಮಗುರು ಜೋರ್ಜ್ ಥೋಮಸ್ ಡಿ’ಸೋಜರವರು ಮೂಡುಬೆಳ್ಳೆ ಚರ್ಚ್ಗೆ ವರ್ಗಾವಣೆಯ ಹಿನ್ನಲ್ಲೆಯಲ್ಲಿ ಆಡಳಿತ ಮಂಡಳಿ ಮಂಡಳಿಯಿಂದ ಅವರಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪಾಲನಾ ಮಂಡಳಿ ಉಪಾಧ್ಯಕ್ಷ ಸಂತೋಷ್ ಡಿ ಸಿಲ್ವಾ, ಕಾರ್ಯದರ್ಶಿ ಬೆನೆಡಿಕ್ಟ ನೊರೋನ್ನ, ಕಾನ್ವೆಂಟ್ನ ಸಿಸ್ಟರ್ ಪ್ರೆಸಿಲ್ಲಾ, 18 ಆಯೋಗದ ಸಂಯೋಜಕ ರಿಚ್ಚರ್ಡ್ ಪಿಂಟೋ ಉಪಸ್ಥಿತರಿದ್ದರು. ಸಂತೋಷ್ ಡಿ ಸಿಲ್ವಾ ಸ್ವಾಗತಿಸಿದರು. ಜೋನ್ ಡಿ ಸಿಲ್ವಾ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.