ಕಾರ್ಕಳ, ಜು.06(DaijiworldNews/HR): ರೆಂಜಾಳ ಮಸೀದಿಯ ಆಡಳಿತ ಮಂಡಳಿಯವವರು ಸ್ಥಳೀಯ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಪ್ರಕರಣಕ್ಕೆ ಸಂಬಂಧಿಸಿದಂತೆ ರಶೀದಾ ಎಂಬವರು ದೂರುದಾರರಾಗಿದ್ದು, ಇವರ ತಂದೆ ಇಬ್ರಾಹಿಂ ಗಾಯಾಳುವಾಗಿದ್ದಾರೆ.
ರೆಂಜಾಳ ಮಸೀದಿಯಯ ಅಧ್ಯಕ್ಷ ಮೈಯುದ್ದೀನ್, ಹಂಝಾ, ಇಕ್ಬಾಲ್, ಅಬೂಬಕರ್, ಇಕ್ಬಾಲ್, ಮುಕ್ರಿ ಹಂಜಾ, ಸಿರಾಜ್ ಪ್ರಕರಣದ ಆರೋಪಿತರು.
ಇಬ್ರಾಹಿಂ ಮನೆಯಿಂದ ಹೊರಟು ಹೋದ ಸ್ವಲ್ಪ ಹೊತ್ತಿನಲ್ಲಿಯೇ ಸಾರ್ವಜನಿಕ ರಸ್ತೆಯಲ್ಲಿ ಬೊಬ್ಬೆ ಬೋರಾಗಿ ಕೇಳಿಬಂದಿರುವ ಕಾರಣದಿಂದಾಗಿ ಗಾಬರಿಗೊಂಡ ಇಬ್ರಾಹಿಂರವರ ಮಗಳು ರಶೀದಾ ಅಳಿಯ ಶಬ್ಬೀರ್ ಘಟನಾ ಸ್ಥಳಕ್ಕೆ ತೆರಳಿದ್ದರು ಆ ಸಂದರ್ಭದಲ್ಲಿ ಆರೋಪಿತರು ಇಬ್ರಾಹಿಂಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಗೈದಿದ್ದರು. ತಡೆಯಲು ಮುಂದಾಗಿದ್ದ ರಶೀದಾ ಹಾಗೂ ಅವರ ಪತಿ ಶಬ್ಬೀರ್ ಮೇಲೂ ಆರೋಪಿತರು ಹಲ್ಲೆ ನಡೆಸಿದ್ದಾರೆ.
ಮಸೀದಿಯ ಆಡಳಿತ ಮಂಡಳಿಯವರಿಗೂ ಸ್ಥಳೀಯ ನಿವಾಸಿ ಇಬ್ರಾಹಿಂ ನಡುವೆ ವೈಯಕ್ತಿಕ ತಕರಾರು ಘಟನೆಗೆ ಕಾರಣವೆನ್ನಲಾಗಿದೆ.
ಇದೇ ಪ್ರಕರಣದ ಮುಂದುವರಿದ ಭಾಗವಾಗಿ ಮಸೀದಿಯ ಆಡಳಿತ ಮಂಡಳಿತ ಅಧ್ಯಕ್ಷ ಮೈಯುದ್ದೀನ್ ಅವರ ಮನೆಗೆ ತೆರಳಿದ ಆರೋಪಿತರಾದ ಇಬ್ರಾಹಿಂ ಹಾಗೂ ಶಬ್ಬೀರ್ ಗಲಾಟೆ ಮಾಡಿ ಮನೆಯಲ್ಲಿದ್ದ ಹೆಂಗಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಂಜೆ ವೇಳೆಗೆ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಮೈಯುದ್ದೀವ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡ ನೀಡಿದ ದೂರು, ಪ್ರತಿದೂರಿನ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.