ಕಾರ್ಕಳ, ಜು.06(DaijiworldNews/HR): ಪಡುಬಿದ್ರಿ ಕಾರ್ಕಳ ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಲೆಮಿನಾ ಕ್ರಾಸ್ ಬಳಿಯಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಪಾದಚಾರಿಯೋರ್ವರು ಗಾಯಗೊಂಡ ಘಟನೆ ಸಂಭಿವಿಸದೆ.
ಸಾಂಧರ್ಭಿಕ ಚಿತ್ರ
ನಿಟ್ಟೆ ಲೆಮಿನಾ ಕ್ರಾಸ್ ಬಳಿಯ ನಿವಾಸಿ ತುಕ್ರ(45) ಘಟನೆಯಲ್ಲಿ ಗಾಯಗೊಂಡವರು.
ರಸ್ತೆಬದಿಯಲ್ಲಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಪಡುಬಿದ್ರಿಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಕಾರು ಅತೀ ವೇಗವಾಗಿ ರಸ್ತೆಯ ತೀರಾ ಎಡಭಾಗವಾಗಿ ಹಾದು ಹೋಗಿರುವುದು ಘಟನೆಗೆ ಕಾರಣವಾಗಿದೆ ತಿಳಿದುಬಂದಿದೆ.
ಪರಿಣಾಮವಾಗಿ ತುಕ್ರ ಅವರು ರಸ್ತೆಗೆ ಬಿದ್ದು ತಲೆಯ ಎಡಭಾಗಕ್ಕೆ ಗಾಯಗಳಾಗಿದ್ದು, ಗಾಯಾಳನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸುದಾಖಲಾಗಿದೆ.
ಮತ್ತೊಂದು ಘಟನೆಯಲ್ಲಿ ಕೆರ್ವಾಶೆ ಬಟ್ಟ ಸೇತುವೆ ಬಳಿಯಲ್ಲಿ ಬೈಕ್ಗಳೆರಡು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರರೊಬ್ಬರು ಗಾಯಗೊಂಡಿದ್ದಾರೆ.
ಪ್ರಕರಣದ ಅಪಾದಿತ ವಿವೇಕ್ ಭಟ್ ಎಂಬುವವರು ತನ್ನ ಮೋಟಾರು ಸೈಕಲ್ನ್ನು ಮುಡಾರು ಕಡೆಯಿಂದ ಕೆರ್ವಾಶೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಕೆರ್ವಾಶೆಯಿಂದ ಮುಡಾರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಟಿವಿಎಸ್ ಎಕ್ಸ್ ಎಲ್. ಮೋಟಾರು ಸೈಕಲ್ಗೆ ಢಿಕ್ಕಿ ಹೊಡೆದಿದ್ದರು.
ಇದರ ಪರಿಣಾಮ ಟಿವಿಎಸ್ ಎಕ್ಸ್ ಎಲ್. ಮೋಟಾರು ಸೈಕಲ್ ಸವಾರ ಗೋಪಾಲ ದೇವಾಡಿಗ ಎಂಬುವವರು ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಗಾಯಾಳು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.