ಮಂಗಳೂರು, ಜು 06 (DaijiworldNews/MS): ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು ಮುಂದಿನ ಆರ್ ಟಿಎ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜೂನ್ ೧ ರಿಂದ 4ರ ತನಕ ಶೇಕಡ 50ರಷ್ಟು ಸಾಮರ್ಥ್ಯದಲ್ಲಿ ಸೀಮಿತ ಖಾಸಗಿ ಬಸ್ ಗಳು ಸಂಚರಿಸಿದ್ದವು.
ಆಗ ಪ್ರಯಾಣದರವನ್ನು ಷರತ್ತು ಬದ್ಧವಾಗಿ ಶೇಕಡ 20ರಷ್ಟು ಏರಿಸಲು ಜಿಲ್ಲಾಧಿಕಾರಿ ಸಮ್ಮತಿಸಿದ್ದರು. ಆದರೆ ಇದೀಗ ಅನ್ ಲಾಕ್ ಹಿನ್ನಲೆಯಲ್ಲಿ ಬಸ್ ಗಳಲ್ಲಿ ಪೂರ್ಣ ಸಾಮರ್ಥ್ಯದ ಷ್ಟು ಪ್ರಯಾಣಿಕರನ್ನು ಕರೆದೊಯ್ದು ಅವಕಾಶ ನೀಡಿರುವುದರಿಂದ ಈಗಾಗಲೇ ಪರಿಷ್ಕೃತ ಬಸ್ ಪ್ರಯಾಣ ದರ ಕುರಿತಂತೆ ಚರ್ಚಿಸಲು ಸೋಮವಾರ ಡಿಸಿ ಕಚೇರಿಯಲ್ಲಿ ನಡೆದ ಸಭೆ ನಡೆಯಿತು.
ಈ ಪರಿಷ್ಕೃತ ದರವನ್ನು ಇದೀಗ ಇಳಿಸಬೇಕೇ ಅಥವಾ ಅದನ್ನೇ ಮುಂದುವರಿಸಬೇಕೇ ಎಂಬುವುದ ಕುರಿತು ಚರ್ಚಿಸಲು ಸೋಮವಾರ ಸಭೆ ಕರೆಯಲಾಗಿತ್ತು. ಆರ್ ಟಿಎ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಾಗಿ ಇರುವುದರಿಂದ ಅಲ್ಲಿವರೆಗೆ ಕಾಯುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ. ಆರ್ ಟಿ ಏ ಸಭೆ ಮುಂದಿನ ವಾರ ನಡೆಯುವ ಸಾಧ್ಯತೆ ಇದೆ.