ಮಂಗಳೂರು, ಜು 05 (DaijiworldNews/MS): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಜುಲೈ 5ರ ಇಂದು ಮಂಗಳೂರು ಭೇಟಿ ಹಿನ್ನಲೆಯಲ್ಲಿ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಸಭಾ ಸದಸ್ಯರಾದ ಕೆ.ಹರೀಶ್ ಕುಮಾರ್, ಮಾಜಿ ಸಚಿವ ಯು.ಟಿ ಖಾದರ್ , ಮಾಜಿ ಶಾಸಕ ಜೆ.ಆರ್ ಲೋಬೋ ಮುಂತಾದದವರು ಸ್ವಾಗತಿಸಿದರು.
ಆ ಬಳಿಕ ಸುಲ್ತಾನ್ ಬತ್ತೇರಿ ಯಲ್ಲಿ ನಡೆಯಲಿರುವ ಜಿಲ್ಲಾ ಮೊಗವೀರರ ಕುಂದುಕೊರತೆಗಳ ಅಧ್ಯಯನ ಸಭೆಯಲ್ಲಿ ಭಾಗವಹಿಸಲು ಜಿಲ್ಲಾ ನಾಯಕರುಗಳೊಂದಿಗೆ ತೆರಳಿದರು. ಇದಾದ ಬಳಿಕ ಸಂಜೆ 6:00 ಗಂಟೆಗೆ ಮಲ್ಲಿಕಟ್ಟೆ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕೋವಿಡ್ ಸಹಾಯ ಹಸ್ತದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಜುಲೈ 6ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವ ಡಿಕೆಶಿ ಅವರು ಬೆಳಗ್ಗೆ ಉಚ್ಚಿಲ ಮಹಾಲಕ್ಷ್ಮಿ ದೇಗುಲದ ಜೀರ್ಣೋದ್ಧಾರ ಕಾಮಗಾರಿಗಳ ವೀಕ್ಷಣೆ, 11 ಗಂಟೆಗೆ ಮಲ್ಪೆಯಲ್ಲಿ ಜಿಲ್ಲಾ ಮೀನುಗಾರರ ಸಮಾಜದ ಕುಂದುಕೊರತೆಗಳ ಅಧ್ಯಯನ ಸಭೆ ಹಾಗೂ ಸಂಜೆ ಕಾಂಗ್ರೆಸ್ ಭವನದಲ್ಲಿ ಕೋವಿಡ್ ಸಹಾಯ ಹಸ್ತದ ಬಗ್ಗೆ ಮಾತುಕತೆ ನಡೆಸಲಿದ್ದಾರೆ.