ಮಂಗಳೂರು, ಜು 05 (DaijiworldNews/MS): ಇಂದಿನಿಂದ ಲಾಕ್ ಲಾಕ್ ಆದೇಶದ ಹಿನ್ನಲೆಯಲ್ಲಿ ಕರಾವಳಿಯ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ದೇವರ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಕೊಲ್ಲೂರು, ಧರ್ಮಸ್ಥಳ , ಕಟೀಲು ದೇವಾಲಯಗಳ ದರ್ಶನಕ್ಕಾಗಿ ಕ್ಷೇತ್ರಕ್ಕೆ ಭಕ್ತರು ಸಂದರ್ಶಿಸಿದ್ದಾರೆ.
ಇನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ನಿರೀಕ್ಷೆಯಂತೆ ಭಕ್ತರು ಶ್ರೀ ಮಂಜುನಾಥ ಸ್ವಾಮಿ ದರ್ಶನಕ್ಕಾಗಿ ಕ್ಷೇತ್ರ ಭೇಟಿ ನೀಡಿದ್ದಾರೆ. ಭಕ್ತರ ಆಗಮನ ನಿರೀಕ್ಷೆಯಂತೆ ಭಾನುವಾರವೇ ಎಲ್ಲಾ ಸಿದ್ದತೆ ನಡೆಸಲಾಗಿತ್ತು. ದೇವಳ, ಆಯಕಟ್ಟುಗಳಲ್ಲಿ ಸ್ಯಾನಿಟೈಜೇಷನ್ ಮಾಡಲಾಗಿತ್ತು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಸೋಮವಾರ ಕೋವಿಡ್ ನಿಯಮದಂತೆ ಅಂತರ ಕಾಯ್ದುಕೊಂಡು ಮಂಜುನಾಥ ಸ್ವಾಮಿ ದರ್ಶನ ಪಡೆದರು.
ಇನ್ನು ಮೂಕಾಂಬಿಕಾ ದೇಗುಲದಲ್ಲಿ ಸೋಮವಾರದಿಂದ ಬೆಳಗ್ಗೆ6 ರಿಂದ ರಾತ್ರಿ 8 ರವರೆಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ದರ್ಶನ ಸಮಯದಲ್ಲಿ ದೇವರಿಗೆ ಅರತಿ ನಡೆಯುತ್ತಿದ್ದಲ್ಲಿ ಆರತಿ ಸ್ವೀಕರಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ತಾಲೂಕಿನ ಬಯಲು ಆಲಯ ಕೊಕ್ಕಡ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಕನ್ಯಾಡಿ ಶ್ರೀ ರಾಮಕ್ಷೇತ್ರ ಸೇರಿದಂತೆ ಭಕ್ತರು ಆಗಮಿಸುತ್ತಿದ್ದು ಕಂಡುಬಂತು.