ಕಾರ್ಕಳ, ಜು. 4 (DaijiworldNews/HR): ರೋಟರಿ ಸಂಸ್ಥೆ, ಕಾರ್ಕಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಇದರ ಜಂಟಿ ಆಶ್ರಯದಲ್ಲಿ "ಅಂತಾರಾಷ್ಟ್ರೀಯ ಮಾದಕ ವಸ್ತು ಮತ್ತು ಅಕ್ರಮ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ" ಕಾರ್ಯಕ್ರಮವನ್ನು ನಗರ ಪೋಲಿಸ್ ಠಾಣೆ ಕಾರ್ಕಳ ಇಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಕಾರ್ಕಳದ ಡಿವೈಎಸ್ಪಿ ಎಸ್ ವಿಜಯ್ ಪ್ರಸಾದ್ ಅವರು ಮಾತನಾಡಿ, "ಮಾದಕ ವಸ್ತುಗಳ ವಿರೋಧಿ ಜಾಗ್ರತಿಯು ನಮ್ಮ ಮನೆ ಹಾಗೂ ನಮ್ಮ ಪರಿಸರದಿಂದಲೇ ಆಗಬೇಕು ಜನರಲ್ಲಿ ಯಾವಾಗ ಜಾಗೃತಿ ಮೂಡುತ್ತದೆ ಆವಾಗ ಸಮಾಜ ಸುಧಾರಣೆಯಾಗುತ್ತದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾದಕ ದ್ರವ್ಯ ವಿರೋಧಿ ಕರಪತ್ರವನ್ನು ಬಿಡುಗಡೆ ಮಾಡಲಾಯಿತು ಮಾತ್ರವಲ್ಲದೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತಹ ಕಾರ್ಯಕ್ರಮಕ್ಕೆ ಚಾಲನೆಯನ್ನು ಡಿವೈಎಸ್ ಪಿ ಎಸ್ ವಿಜಯ ಪ್ರಸಾದ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸಂಪತ್ ಕುಮಾರ್ ,ನಗರ ಠಾಣಾಧಿಕಾರಿ ಎಸ್ ಐ ಮಧು ,ಗ್ರಾಮಾಂತರ ಠಾಣಾಧಿಕಾರಿ ಎಸ್ ಐ .ತೇಜಸ್ವಿ ,ಕಾರ್ಕಳ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಎಸ್ ಐ . ಜನಾರ್ದನ್ ಹಾಗೂ ಎಲ್ಲಾ ಪೋಲಿಸ್ ಸಿಬ್ಬಂದಿಗಳು , ಸಾರ್ವಜನಿಕರು ಹಾಗೂ ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.