ಕಾರ್ಕಳ,ಜು.03 (DaijiworldNews/HR): ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಮೋಹನ್ದಾಸ್ ಶೆಟ್ಟಿ ಎನ್ ಅವರು ನಿಧನರಾಗಿದ್ದು, ಶೃದ್ದಾಂಜಲಿ ಸಭೆ ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಶೃದ್ದಾಂಜಲಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾಗಿರುವ ರತ್ನಾಕರ್ ಅಮಿನ್, ಸದಸ್ಯರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ, ಜಯವರ್ಮ ಜೈನ್ ಮಾಪಾಲು, ನಾರಾಯಣ ಪೂಜಾರಿ, ಹೆಚ್. ಸಂಜೀವ ನಾಯ್ಕ್, ಜಯರಾಮ ಆಚಾರಿ, ಎಮ್ ವಾದಿರಾಜ್ ಶೆಟ್ಟಿ, ಪ್ರಕಾಶ್ ಬಲಿಪ, ಎಸ್ ದೇವಾನಂದ ಶೆಟ್ಟಿ , ಶ್ರೀಮತಿ ಜ್ಯೋತಿ ರಮೇಶ್ ಆಚಾರ್ಯ ಹಾಗೂ ಸಮಿತಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.