ಮಂಗಳೂರು, ಜು 03 (DaijiworldNews/MS): ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ವತಿಯಿಂದ ಲಸಿಕಾ ಕಾರ್ಯಕ್ರಮವನ್ನು ಸಂಘದ ಸಭಾಭವನದಲ್ಲಿ ಆಯೋಜಿಸಿದ್ದು, ಮಹಾನಗರಪಾಲಿಕೆಯ ಮಾನ್ಯ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಕಾರ್ಮಿಕರಿಗೋಸ್ಕರ ಅಭಿಯಾನವನ್ನು ಆಯೋಜನೆ ಮಾಡಿದ ಸಂಘದ ಕಾರ್ಯವನ್ನು ಶ್ಲಾಘಿಸಿ ಆರೋಗ್ಯ ಕಾರ್ಯಕರ್ತರು , ಕೊರೋನಾ ವಾರಿಯರ್ಸ್, ರೆಡ್ ಕ್ರಾಸ್ ಸಂಸ್ಥೆಯ ಶ್ರಮವನ್ನು ಉಲ್ಲೇಖ ಮಾಡಿ ಅವರಿಗೂ ಧನ್ಯವಾದವನ್ನು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ವೇದವ್ಯಾಸ್ ಕಾಮತ ಭೇಟಿ ನೀಡಿ ಲಸಿಕಾ ಅಭಿಯಾನದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಟರಿಂಗ್ ಮಾಲಕರ ಸಂಘ ಕಾರ್ಯವನ್ನು ಮತ್ತು ಕಾರ್ಮಿಕರ ಬಗ್ಗೆ ಇರುವ ಕಾಳಜಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಮಂಗಳೂರು ಕ್ಷೇತ್ರದ ಶಾಸಕರು ಯುಟಿ ಖಾದರ್ ಅವರು ಮಾತನಾಡುತ್ತಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಅಭಿನಂದಿಸುತ್ತಾ ಸರಕಾರದ ಲಸಿಕಾ ಯೋಜನೆಯನ್ನು ಅಭಿಯಾನದ ಮೂಲಕ ಕಾರ್ಮಿಕ ವರ್ಗಕ್ಕೆ ತಲುಪಿಸುವಲ್ಲಿ ಶ್ರಮವಹಿಸಿದ ಕ್ಯಾಟರಿಂಗ್ ಮಾಲಕರ ಸಂಘವನ್ನು ಅಭಿನಂದಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲಸಿಕೆಯು ಅತ್ಯಗತ್ಯವಾಗಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನಗಳ ಫಲಾನುಭವಿಗಳ ಆಗಬೇಕು, ಈ ಮೂಲಕ ಆರೋಗ್ಯಪೂರ್ಣ ಜೀವನವನ್ನು ನಡೆಸುವಂತಾಗಲಿ ಎಂದು ಹಾರೈಸುತ್ತಾ , ಕ್ಯಾಟರಿಂಗ್ ಮಾಲಕರ ಸಂಘದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರದೊಂದಿಗೆ ಸಮಾಲೋಚನೆ ನಡೆಸುವುದಾಗಿ ಭರವಸೆಯನ್ನು ನೀಡಿದರು.
ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರು ಚಂದ್ರಹಾಸ್ ಶೆಟ್ಟಿ ಶುಭ ಹಾರೈಸಿದರು ,ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷರು ಅನೀಶ ಶೇಖ್ ಅವರು ಅತಿಥಿಗಳನ್ನು ಸ್ವಾಗತಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು., ಕ್ಯಾಟರಿಂಗ್ ಮಾಲಕರ ಸಂಘದ ಉಪಾಧ್ಯಕ್ಷರು ರಾಜಗೋಪಾಲ್ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಲಸಿಕಾ ಅಭಿಯಾನದ ಮಹತ್ವವನ್ನು ತಿಳಿಸುವುದರೊಂದಿಗೆ ಕ್ಯಾಟರಿಂಗ್ ಮಾಲಕರ ಉದ್ದಿಮೆ ಪರವಾನಿಗೆ ತೆರಿಗೆಯನ್ನು (ಘನ ತ್ಯಾಜ್ಯ) ಕಡಿತಗೊಳಿಸುವಂತೆ ಮಾನ್ಯ ಮೇಯರ್ ರವರನ್ನು ಒತ್ತಾಯಿಸಿದರು; ಈ ಸಂದರ್ಭದಲ್ಲಿ ಕ್ಯಾಟರಿಂಗ್ ಮಾಲಕರ ಸಂಘದ ಗೌರವಾಧ್ಯಕ್ಷರು ಸುಧಾಕರ್ ಕಾಮತ್, ಎಂ. ಎ.ಎಸ್ ಇಕ್ಬಾಲ್, ವೇವಲ್ ಲಸ್ರದೋ ಮತ್ತು ಕಾರ್ಯದರ್ಶಿ ಯಶವಂತ ಪೂಜಾರಿ ಕೋಶಾಧಿಕಾರಿ ಅವಿಲ್ ರೇಗೊ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತರು ಸುಕ್ಪಾಲ್ ಪೊಳಲಿ , ಯತೀಶ್ ಬೈಕಂಪಾಡಿ, ಕಾರ್ಪೊರೇಟರ್ ಸಂದೀಪ್ ಗರೋಡಿ ಯಾವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ವೇದವ್ಯಾಸ ಕಾಮತ ಭೇಟಿ ನೀಡಿ ಲಸಿಕಾ ಅಭಿಯಾನದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಟರಿಂಗ್ ಮಾಲಕರ ಸಂಘ ಕಾರ್ಯವನ್ನು ಮತ್ತು ಕಾರ್ಮಿಕರ ಬಗ್ಗೆ ಇರುವ ಕಾಳಜಿಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು.