ಉಡುಪಿ, ಜು.03 (DaijiworldNews/HR): ಜಿಲ್ಲೆಯಲ್ಲಿ ಜುಲೈ 3 ಮತ್ತು 4ರಂದು ವೀಕೆಂಡ್ ಕರ್ಫ್ಯೂ ವೇಳೆ ಬಸ್ ಸಂಚಾರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದರೂ ಕೂಡ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ಸಂಚಾರ ನಡೆಸಿದೆ ಎಂದು ತಿಳಿದು ಬಂದಿದೆ.
ಉಡುಪಿಯಲ್ಲಿ ಇಂದು ಸಿಟಿ ಬಸ್ಸುಗಳು ಸಂಚಾರ ನಿಲ್ಲಿಸಿದ್ದು, ಕೆಎಸ್ಆರ್ಟಿಸಿ ಮತ್ತು ಇತರ ಕೆಲವು ಎಕ್ಸ್ ಪ್ರೆಸ್ ಬಸ್ಗಳು ಎಂದಿನಂತೆ ಸಂಚಾರ ನಡೆಸಿದೆ ಎನ್ನಲಾಗಿದೆ.
ಇನ್ನು ಕೆಎಸ್ಆರ್ಟಿಸಿಯಿಂದ ಮಂಗಳೂರು ಸೇರಿದಂತೆ ಶಿವಮೊಗ್ಗ, ಆಗುಂಬೆ, ಕಾರ್ಕಳ, ಕುಂದಾಪುರಕ್ಕೆ ಹಾಗೂ ಖಾಸಗಿಯವರಿಂದ ಕುಂದಾಪುರ, ಮಂಗಳೂರು, ಶಿವಮೊಗ್ಗಕ್ಕೆ ಕೆಲವೊಂದು ಬಸ್ ಸಂಚಾರ ನಡೆಸಿದೆ.
ಶುಕ್ರವಾರ ರಾತ್ರಿಯ ಆದೇಶದಲ್ಲಿ ಕೆಂಡ್ ಕರ್ಫ್ಯೂನಲ್ಲಿ ಬಸ್ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿಗಳು ಸ್ವಷ್ಟವಾಗಿ ತಿಳಿಸಿದ್ದರೂ ಕೂಡ ಇಂದು ಬೆಳಗ್ಗಿನಿಂದ ಬಸ್ಗಳು ಸಂಚಾರ ನಡೆಸುತ್ತಿರುವುದು ಕಂಡುಬಂದಿದೆ.