ಪುತ್ತೂರು, ಜು 03 (DaijiworldNews/MS): ನಗರದ ಗಾಂಧಿ ಕಥೆಯಲ್ಲಿರುವ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಸಮೀಪದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಮಾನಸಿಕ ಅಸ್ವಸ್ಥನೊಬ್ಬ ಕೃತ್ಯ ಇದು ಎಂದು ದೃಢಪಟ್ಟಿದೆ.
ಜುಲೈ ಒಂದರಂದು ಪ್ರತಿಮೆಯ ಕನ್ನಡಕವನ್ನು ಹಣೆಯ ಮೇಲಿರಿಸಿದ್ದಲ್ಲದೆ ತಲೆಯ ಮೇಲೆ ಟೀ ಶರ್ಟ್ ಒಂದನ್ನು ಏರಿಸಿರುವುದನ್ನು ಪತ್ತೆಯಾಗಿದ್ದು. ಈ ಬಗ್ಗೆ ಸಾಮಾಜಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ವ್ಯಕ್ತಿಯೋರ್ವ ಗಾಂಧಿ ಕಟ್ಟೆಯ ಸಮೀಪ ಬಂದು ತನ್ನ ಚಪ್ಪಲಿಯನ್ನು ಆವರಣದ ಹೊರಗಡೆ ಕಳಸಿ ಪ್ರತಿಮೆಯ ತಲೆಮೇಲೆ ಬಟ್ಟೆಯನ್ನು ಇರಿಸಿ ಬಳಿಕ ಹತ್ತು ನಿಮಿಷಗಳ ಕಾಲ ಕಟ್ಟೆ ಸಮೀಪ ಕುಳಿತುಕೊಂಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಚಾರಣೆ ನಡೆಸಿದಾಗ ಆತ ಮಾನಸಿಕ ಅಸ್ವಸ್ಥನಾಗಿದ್ದು ಪರಿಸರದಲ್ಲಿ ತಿರುಗಾಡುತ್ತಿರುವುದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.