ಮಂಗಳೂರು, ಜು. 02 (DaijiworldNews/SM): ವಕ್ಪ್ ಹಗರಣದಲ್ಲಿ ಶಾಫಿ ಸ ಅದಿ ಭಾಗಿಯಾಗಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಶಾಫಿ ಸ ಅದಿ ವಿರುದ್ಧ ಅನ್ವಾರ್ ಮಾಣಿಪಾಡಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಶಾಫಿ ಸ ಅದಿ ಪ್ರತಿಕ್ರಿಯೆ ನೀಡಿದ್ದಾರೆ.
ವಕ್ಷ್ ಅಧ್ಯಕ್ಷ ಚುನಾವಣೆಯ ಆತಂಕ, ಅಸೂಯೆ ಮತ್ತು ಹತಾಶೆಯಿಂದ ಮಾಣಿಪಾಡಿ ಈ ಆರೋಪ ಮಾಡಿದ್ದಾರೆ. ಮಾಣಿಪ್ಪಾಡಿ ಮಾಡಿರುವ ಈ ಆರೋಪ ಆಧಾರರಹಿತವಾಗಿದೆ. ಅವರು ಪ್ರಾಯದಲ್ಲಿ ಹಿರಿಯರಾದ ಕಾರಣಕ್ಕೆ ನಾನು ಪ್ರತ್ಯುತ್ತರ ನೀಡಿಲ್ಲ.
ಸುಳ್ಳು ಆರೋಪ ಮಾಡುವ ಮಾಣಿಪ್ಪಾಡಿಯನ್ನು ನಾನು ಕ್ಷಮಿಸುತ್ತೇನೆ. ಆದರೆ, ನನ್ನ ಸಹ ಕಾರ್ಯಕರ್ತರು ಈ ಬಗ್ಗೆ ಕಾನೂನು ಕ್ರಮಕ್ಕಿಳಿಯಳಿದ್ದಾರೆ. ಇದಕ್ಕೆ ನಾನು ಹೊಣೆಯಲ್ಲ ಎಂದು ಟ್ವಿಟರ್ ನಲ್ಲಿ ವಕ್ಷ್ ಸದಸ್ಯ ಶಾಫಿ ಸ ಅದಿ ಟ್ವೀಟ್ ಮಾಡಿದ್ದಾರೆ.