ಮಂಗಳೂರು, ಜು 02 (DaijiworldNews/MS): ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಕಳ್ಳ ಸಾಗಾಟ ಮಾಡುತ್ತಿದ್ದ 20,89,800 ರೂ. ಮೌಲ್ಯದ 430 ಗ್ರಾಂ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಕಾಸರಗೋಡು ಪುತ್ತೂರು ಮೂಲದ ಮೊಯಿದೀನ್ ಮುನಾಸೀರ್ ಪಡಿನ್ಹಾರ್ ಮೊಹಮ್ಮದ್ ಎಂಬಾತ ಜು.2 ರ ಶುಕ್ರವಾರ ಬೆಳಗ್ಗೆ ಫ್ಲೈಟ್ ನಂ. ಐಎಕ್ಸ್ 248 ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಬಂದಿಳಿದಿದ್ದು, ಗುದದ್ವಾರದಲ್ಲಿ ಚಿನ್ನದ ಪುಡಿಯನ್ನು ಗಮ್ ನೊಂದಿಗೆ ಮಿಶ್ರಣ ಮಾಡಿ ಕ್ಯಾಪ್ಸೂಲ್ಗಳ ರೀತಿ ಇಟ್ಟುಕೊಂಡಿದ್ದ.
ಆತನನ್ನು ಬಂಧಿಸಿ, ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಾರ್ಯಾಚರಣೆ ನೇತೃತ್ವವನ್ನು ಕಸ್ಟಮ್ಸ್ ಇಲಾಖೆಯ ಉಪ ಆಯುಕ್ತ ಪ್ರವೀಣ್ ಕಂಡಿ ವಹಿಸಿದ್ದು ಕಸ್ಟಮ್ಸ್ ಅಧಿಕಾರಿಗಳಾದ ರಾಕೇಶ್ ಕುಮಾರ್, ಅಧೀಕ್ಷಕರಾದ ವಿಕಾಸ್ ಕುಮಾರ್, ಬಿಕ್ರಮ್ ಚಕ್ರವರ್ತಿ ಮತ್ತು ಇತರ ಅಧಿಕಾರಿಗಳು ಭಾಗಿಯಾಗಿದ್ದರು.