ಮಂಗಳೂರು, ಜು 02 (DaijiworldNews/MS): ನಗರದ ಬೆಂದೂರು ಸೈಂಟ್ ಆಗ್ನೇಸ್ ಕಾಲೇಜಿನ ಮುಂಭಾಗ ಶಿವಭಾಗ್ ಗೆ ಹೋಗುವ ರಸ್ತೆಯನ್ನು ಗುರುವಾರ ಏಕಮುಖ ರಸ್ತೆಯನ್ನಾಗಿಸಿದ ಒಂದೇ ದಿನ ಪರಿಣಾಮ 5 ಅಪಘಾತ ಸಂಭವಿಸಿದ್ದು ಅಪಘಾತಕ್ಕೆ ಒಳಗಾದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಒಂದು ಭಾಗದ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇನ್ನೊಂದು ರಸ್ತೆಯಲ್ಲಿ ವಾಹನವನ್ನು ಹೋಗಲು ಹಾಗೂ ಬರಲು ಮಾರ್ಪಾಡು ಮಾಡಲಾಗಿತ್ತು. ಸಾರ್ವಜನಿಕರಲ್ಲಿ ಇದು ಗೊಂದಲಕ್ಕೆ ಕಾರಣವಾಗಿ ಅಪಘಾತಗಳು ನಡೆದಿದೆ.
ಅಪಘಾತದಲ್ಲಿ ಯಾರಿಗೂ ಗಂಭೀರವಾಗಿಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಶೀಘ್ರ ಮುಗಿಸಬೇಕೆಂದು ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ