ಕಾರ್ಕಳ, ಜು 01 (DaijiworldNews/PY): ಹಿರಿಯಂಗಡಿ ಶ್ರಿ ದುರ್ಗಾಪರಮೇಶ್ವರಿ ದೇವಸ್ಥಾನದ ಇದರ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ವೀರೇಂದ್ರ ಹೆಗ್ಡೆಯವರು ಕ್ಷೇತ್ರದ ವತಿಯಿಂದ 5 ಲಕ್ಷ ರೂ. ದೇಣಿಗೆ ಬಿಡುಗಡೆ ಮಾಡಿದ್ದಾರೆ.
ಆ ಪ್ರಯುಕ್ತ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅವರು ದೇವಳದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಅವರಿಗೆ ಡಿ.ಡಿ ಅನ್ನು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಕಾಶ ಜಾದವ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶುಭದ ರಾವ್, ಮೊಕ್ತೇಸರರುಗಳಾದ ರಾಮಚಂದ್ರರಾವ್, ಗಣೇಶ್ ರಾವ್, ಸುದೀಂದ್ರರಾವ್, ಸಮಿತಿಯ ಉಪಾಧ್ಯಕ್ಷರುಗಳಾದ ಶಿವಾಜಿ ರಾವ್, ಪ್ರಕಾಶ್ ಪವಾರ್, ಕಾರ್ಯದರ್ಶಿ ಪ್ರಸನ್ನರಾವ್, ಸಮುದಾಯ ಅಭಿವೃದ್ಧಿ ವಿಭಾಗದ ಯೋಜನಾಧಿಕಾರಿ ಪುಪ್ಪರಾಜ್, ಮೇಲ್ವಿಚಾರಕಿ ಶಾರದಾ ರೈ, ಸೇವಾ ಪ್ರತಿನಿಧಿ ಶೋಭಾ ವಿಠಲ್ ಜಿ. ರಾವ್ ವಲಯ ಒಕ್ಕೂಟದ ಅದ್ಯಕ್ಷ ಮಂಜುನಾಥ್ ಪಾಟೀಲ್, ಪುಷ್ಪ ಸಾಣೂರು ಮತ್ತಿತರರು ಉಪಸ್ಥಿತರಿದ್ದರು.