ಮಂಗಳೂರು, ಜು 01 (DaijiworldNews/MS): ಕೊರೊನಾ ಎರಡನೇ ಅಲೆ ಬಳಿಕ ಹೇರಲಾಗಿದ್ದ ಕರ್ಪ್ಯೂ ಹಾಗೂ ಲಾಕ್ ಡೌನ್ ನಂತರ ಇದೀಗ 2 ತಿಂಗಳ ಬಳಿಕ ಅವಿಭಜಿತ ಜಿಲ್ಲೆಯಲ್ಲಿ ಜು.1 ರ ಇಂದಿನಿಂದ ಬೆರಳೆಣಿಕೆಯ ಖಾಸಗಿ ಬಸ್ ಗಳು ರಸ್ತೆಳಿದಿವೆ.
ಈಗಾಗಲೇ ಸೀಮಿತ ಸಂಖ್ಯೆಯಲ್ಲಿ ಬಸ್ ಗಳನ್ನು ರಸ್ತೆಗಿಳಿಸಲು ಬಸ್ ಮಾಲಕರು ನಿರ್ಧರಿಸಿದ್ದರು. ಅದರಂತೆ ಇಂದಿನಿಂದ ಕರಾವಳಿಯ ಹಲವು ಕಡೆಗೆ ಬಸ್ ಗಳು ಸಂಚರಿಸಲಿವೆ.
ದ.ಕ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಆದೇಶದ ಪ್ರಕಾರ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಲಾಕ್ ಡೌನ್ ವಿನಾಯಿತಿ ಇದೆ. ಜಿಲ್ಲಾಡಳಿತ ಈಗಾಗಲೇ ನೀಡಿರುವ ಆದೇಶದ ಪ್ರಕಾರ ಜಿಲ್ಲಾ ವ್ಯಾಪ್ತಿಯಲ್ಲಿ ಮಧ್ಯಾಹ್ನ ಒಂದು ಗಂಟೆಯವರೆಗೆ ಮಾತ್ರ ಬಸ್ ಕಾರ್ಯಚರಿಸಲು ಸಧ್ಯ. ಈ ವೇಳೆ ಹೆಚ್ಚು ಬಸ್ ಓಡಿಸಿದರೆ ನಷ್ಟವೇ ಹೆಚ್ಚು ಎಂದು ಮನಗಂಡಿರುವ ಮಾಲಗಳು ಹೆಚ್ಚು ಬಸ್ ರಸ್ತೆಗಿಳಿಸದಿರಲು ನಿರ್ಧರಿಸಿದ್ದಾರೆ.
ಇನ್ನು ಸಿಟಿ ಮತ್ತು ಖಾಸಗಿ ಬಸ್ ದರ ಈಗಾಗಲೇ ಶೇ.20 ರಷ್ಟು ಏರಿಕೆ ಮಾದಲಾಗಿದೆ. ನೂತನ ದರವೂ ಜು. 1 ರಿಂದಲೇ ಜಾರಿಗೆ ಬರಲಿದೆ.