ಕಾಸರಗೋಡು, ಜೂ. 30(DaijiworldNews/SM): ಬೈಕ್ ಮತ್ತು ಪಿಕಪ್ ನಡುವೆ ಉಂಟಾದ ಅಪಘಾತವೊಂದರಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ಮಲಪ್ಪುರಂನ ತಿರುರಾ೦ಗಡಿಯಲ್ಲಿ ನಡೆದಿದೆ.
ಮಾಣಿಮೂಲೆಯ ಮುಹಮ್ಮದ್ ಜೋಹಾರ್(21) ಮೃತಪಟ್ಟ ಯುವಕ. ಜೊತೆಗಿದ್ದ ಮಾಣಿಮೂಲೆಯ ಶರತ್(20) ಗಾಯಗೊಂಡಿದ್ದಾರೆ. ಎರ್ನಾಕುಲಂನಲ್ಲಿ ಖಾಸಗಿ ಕಂಪೆನಿಯೊಂದರ ಸಂದರ್ಶನಕ್ಕೆ ತೆರೆಳಿ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಗಂಭೀರ ಗಾಯಗೊಂಡ ಇಬ್ಬರನ್ನು ತಿರೂರಿನ ಆಸ್ಪತ್ರೆಗೆ ತಲಪಿಸಿದರೂ ಜೋಹರ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಇಬ್ಬರು ಸೋಮವಾರ ಎರ್ನಾಕುಲಂಗೆ ತೆರಳಿದ್ದರು. ಮೃತದೇಹವನ್ನು ಬುಧವಾರ ರಾತ್ರಿ ಊರಿಗೆ ತಂದು ಅಂತ್ಯಕ್ರಿಯೆ ನಡೆಸಲಾಯಿತು.