ಕಾಸರಗೋಡು , ಜೂ 30 (DaijiworldNews/MS): ಎಂ.ಬಿ.ಬಿ.ಎಸ್. ವಿದ್ಯಾರ್ಥಿ ನಿದ್ದೆಯಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೂ 29 ರ ಮಂಗಳವಾರ ನಡೆದಿದೆ. ಅಡ್ಕತ್ತಬೈಲುಗುತ್ತು ರೋಡ್ ತೊಯ್ಬಾ ಹೌಸ್ ನಿವಾಸಿ ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯ ಡಾ| ಅಬ್ದುಲ್ ಸತ್ತಾರ್ ಅವರ ಪುತ್ರ ಶಹಲ್ ರಹ್ಮಾನ್ (22) ನಿಧನ ಹೊಂದಿದರು.
ಇವರು ಮಂಗಳೂರಿನ ವೈದ್ಯಕೀಯ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಜೂನ್ 28ರಂದು ರಾತ್ರಿ ಊಟ ಮಾಡಿ ಮನೆಯಲ್ಲಿಯೇ ನಿದ್ದೆ ಮಾಡಿದ್ದರು ಮಂಗಳವಾರ ಬೆಳಗ್ಗೆ ಅವರು ಎದ್ದಿರಲಿಲ್ಲ. ಎಬ್ಬಿಸಲು ಪ್ರಯತ್ನಿಸಿದಾಗ ಪ್ರಯತ್ನಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರು ತಾಯಿ ಶಮೀಮ, ಸಹೋದರ ಸಾಬಿತ್ ರಹ್ಮಾನ್ ಸಹೋದರಿ ಸನ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ