ಮಂಗಳೂರು, ಜೂ. 29(DaijiworldNews/SM): ಕೊರೋನಾ ಸಂದರ್ಭದಲ್ಲಿ ಜನರ ಓಡಾಟ ನಿಯಂಟ್ರಿಸುವ ನಿಟ್ಟಿನಲ್ಲಿ ಸರಕಾರ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಈ ನಿಯಮಗಳನ್ನು ಉಲ್ಲಂಘಿಸಿ ಅನೇಕ ವಾಹನಗಳು ಸಂಚಾರ ನಡೆಸಿದ್ದು, ಅಂತಹ ವಾಹನಗಳನ್ನು ಜಪ್ತಿ ಮಾಡಲಾಗಿದೆ. ನಗರದಲ್ಲಿ ಇಲ್ಲಿಯ ತನಕ ಮೂರು ಸಾವಿರಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಮಾಹಿತಿ ನೀಡಿದ್ದು, ದಂಡ ಪಾವತಿಸಿ ಬಿಡುಗಡೆ ಸೂಚಿಸಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ 3000ಕ್ಕೂ ಅಧಿಕ ವಾಹನ ಜಪ್ತಿ ಆಗಿದೆ. ಜಪ್ತಿ ವಾಹನಗಳ ಬಿಡುಗಡೆ ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ಜಪ್ತಿ ಪಡಿಸಲಾದ ವಾಹನ ದಂಡ ಪಾವತಿಸಿ ಬಿಡುಗಡೆ ಮಾಡುವಂತೆ ಸೂಚನೆ ಇದೆ. ದ್ವಿಚಕ್ರ ವಾಹನ ಇನ್ನಿತರ ವಾಹನಗಳಿಗೆ ದಂಡ ವಿಧಿಸಿ ಬಿಡುಗಡೆಗೆ ಮಾಡಲಾಗುತ್ತಿದೆ. ಇನ್ನೂ ಭಾರತೀಯ ಮೋಟರು ಕಾಯ್ದೆ ಉಲ್ಲಂಘನೆ ಮಾಡಿದ ವಾಹನಗಳನ್ನು ದಂಡ ವಿಧಿಸಿ ಬಿಡಲಾಗಿದೆ. ಎಫಿಡಮಿಕ್, ಎನ್ಡಿಎಂಎ ಪ್ರಕರಣದ ವಾಹನಗಳನ್ನು ಬಾಂಡ್ ಪಡೆದು ಬಿಡುಗಡೆ ಮಾಡಲಾಗುತ್ತಿದೆ. ಬಾಂಡ್ ಪಡೆದು ಬಿಡುಗಡೆ ಮಾಡಲಾದ ವಾಹನಗಳ ಮೇಲೆ ಕೇಸ್ ಮುಂದುವರಿಯಲಿದೆ. ಉಳಿದ ವಾಹನಗಳನ್ನು ಹೈಕೋರ್ಟ್ ನಿರ್ದೇಶನದಂತೆ ಬಿಡುಗಡೆ ಮಾಡಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.